ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ಸಾಮೂಹಿಕ ಪ್ರಾರ್ಥನೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಸುಳ್ಯ ನಗರದ ವತಿಯಿಂದ ಪ್ರಸ್ತುತ ವರ್ಷದಲ್ಲಿ ವಿಪರೀತ ಸೆಕೆ ಹಾಗೂ ಕುಡಿಯುವ ನೀರಿನ ಅಭಾವ ತಲೆದೋರಿ ಜನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಆದುದರಿಂದ ಆದಷ್ಟು ಬೇಗ ಮಳೆ ಬರಲಿ ಎಂದು ಎ.24 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಕಾರ್ಯಕರ್ತರು ಸಾಮೂಹಿಕ ಪ್ರಾರ್ಥನೆ ಮಾಡಿದರು.


ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಬಜರಂಗದಳ ಸಹಸಂಯೋಜಕ ಲತೀಶ್ ಗುಂಡ್ಯ, ವಿ.ಎಚ್.ಪಿ ಸುಳ್ಯ ಕಾರ್ಯದರ್ಶಿ ರಂಜಿತ್ ಕೇರ್ಪಳ,ಬಜರಂಗದಳ ಸುಳ್ಯ ಪ್ರಖಂಡ ಸಂಯೋಜಕ ಹರಿಪ್ರಸಾದ್ ಎಲಿಮಲೆ,ಬಜರಂಗದಳ ಸಹ ಸಂಯೋಜಕ ಅರವಿಂದ್ ಸುಳ್ಯ, ನಿಧಿ ಪ್ರಮುಕ್ ಸಂದೀಪ್,ನಗರ ಕಾರ್ಯದರ್ಶಿ ದೇವಿಪ್ರಸಾದ್,ಬಜರಂಗದಳ ಸುಳ್ಯ ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಗಿರಿಧರ್,ಪ್ರಕಾಶ್ ಯಾದವು,ರೂಪೇಶ್ ಪೂಜರಿಮನೆ, ದಿಲೀಪ್ ಉಪಸ್ಥಿತರಿದ್ದರು.