ದೊಡ್ಡತೋಟ : ಆರ್ನೋಜಿಯಲ್ಲಿ ದೈವಜ್ಞರಿಗೆ ಸನ್ಮಾನ

0

ದೊಡ್ಡತೋಟದಲ್ಲಿರುವ ಆರ್ನೋಜಿ ತರವಾಡಿಗೆ ಸಂಬಂಧಿಸಿದ ದೈವಜಾವಡಿಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳುವ ಸಂಕಲ್ಪ ಪೂಜೆಯು ಶ್ರೀ ಕಾಲಭೈರವನ ಸನ್ನಿಧಿಯಲ್ಲಿ ನಡೆಯಿತು.

ದೈವ ಚಾವಡಿಯನ್ನು ಸ್ಥಳಾಂತರಿಸುವ ತಾಂತ್ರಿಕ ವಿಧಿ ವಿಧಾನಗಳನ್ನು ಪಾರಂಪರಿಕ ರೀತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಹಾಗೂ ದೈವಜ್ಞರ ಚಂದ್ರಶೇಖರ ರವರ ಮಾರ್ಗದರ್ಶನದಂತೆ ನಡೆಸಲಾಯಿತು. ಚಾವಡಿಯ ಅನುವಂಶಿಯ ಪೂಜಾರಿ ಯತೀಶ್ ಆರ್ನೋಜಿಯವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ದೈವಜ್ಞ ಚಂದ್ರಶೇಖರ್ ರವರನ್ನು ಕುಟುಂಬದ ಹಿರಿಯರಾದ ಡೀಯಪ್ಪ ಗೌಡರ ಸಭಾಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪುರ್ಲುಮಕ್ಕಿ ಗೋಪಾಲಕೃಷ್ಣರು ಭಗವಹಿಸಿದ್ದರು. ಸಮಿತಿ ಅಧ್ಯಕ್ಷ ಎ.ಕೆ. ಹಿಮಕರರವರು ಪ್ರಾಸ್ತಾಮಿಕ ಮಾತುಗಳನ್ನಾಡಿದರು. ಕುಟುಂಬದ ಹಿರಿಯರು ಪಂಚಾಯಿತಿ ಸದಸ್ಯ ನಿವೃತ್ತ ಪಿಡಿಓ ಹೂವಪ್ಪಗೌಡ ಆರ್ನೋಜಿ, ಎ. ಕೆ. ಗೋಪಾಲಕೃಷ್ಣ, ಗುಣಪಾಲ ನಾಗತೀರ್ಥ, ಗಣೇಶ ಕರುಂಬು, ಹರೀಶ್ ಮಡಿಕೇರಿ, ಸುನಿಲ್ ಆರ್ನೋಜಿ, ಪುರುಷೋತ್ತಮ, ಶ್ರೀಮತಿ ಚಿನ್ನಮ್ಮ, ಶ್ರೀಮತಿ ಹೇಮಾವತಿ, ಪದ್ಮನಾಭ ಗೌಡ ಕೆದ್ಕಾನ ಮೊದಲಾದವರು ಉಪಸ್ಥಿತರಿದ್ದರು.