ಪಂಜ:ದಿ.ಚಿದಾನಂದ ಬಿಳಿಮಲೆ ಯವರಿಗೆ ಶ್ರದ್ಧಾಂಜಲಿ ಸಭೆ

0

ಪಂಜ ಲಯನ್ಸ್ ಕ್ಲಬ್ ನಿವೇಶನದ ಸ್ಥಳದಾನಿ, ಕ್ಲಬ್ ನ ಕ್ರಿಯಾಶೀಲ ಸದಸ್ಯ ಚಿದಾನಂದ ಬಿಳಿಮಲೆ ಅವರು ಏ.12ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ-ನುಡಿನಮನ ಕಾರ್ಯಕ್ರಮ ಮೃತರ ಸ್ವಗೃಹದಲ್ಲಿ ಏ.29 ರಂದು ನಡೆಯಿತು
ಹಿರಿಯ ಸಾಮಾಜಿಕ ಧುರೀಣ ಜಾಕೆ ಮಾಧವ ಗೌಡ ರವರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಶಶಿಧರ ಪಳಂಗಾಯ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೃತರ ಪತ್ನಿ ಶ್ರೀಮತಿ ಯಶೋಧ ಬಿ ಸಿ , ಪುತ್ರ ಪ್ರಜ್ವಲ್ ಪುತ್ರಿ ಶ್ರೀಮತಿ ಪ್ರಗತಿ.ಅಳಿಯ ಗೌತಮ್ , ಶ್ರೀಮತಿ ಯಶೋಧ ಅವರ ಸಹೋದರ ಡಿ.ಬಿ. ಬಾಲಕೃಷ್ಣ ಹಾಗೂ ಬಂಧು ಮಿತ್ರರು,ಸಹೋದರ-ಸಹೋದರಿಯರು ಕುಟುಂಬಸ್ಥರು ,ಪಂಜ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ
ಪುಷ್ಪಾರ್ಚನೆ ಸಲ್ಲಿಸಿದರು.