ಕುಲ್ಕುಂದದಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ ಆರಂಭ

0

ಕರ್ನಾಟಕ ಬ್ಯಾಡ್ಮಿಂಟನ್ ಅಕಾಡೆಮಿ ಸುಬ್ರಹ್ಮಣ್ಯದ ವತಿಯಿಂದ, ಸುಬ್ರಹ್ಮಣ್ಯ ಜೆಸಿಐ ಕುಕ್ಕೆಶ್ರೀ ರೋಟರಿ ಕ್ಲಬ್, ಸ್ಪೋರ್ಟ್ಸ್ ಕ್ಲಬ್ ಹಾಗೂ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯದ ಜಂಟಿ ಆಶ್ರಯದಲ್ಲಿ ಕುಲ್ಕುಂದ ದಲ್ಲಿ ಒಂದು ತಿಂಗಳ ಬೇಸಿಗೆ ಶಿಬಿರವು ಬುಧವಾರ ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು ಕರ್ನಾಟಕ ಬ್ಯಾಡ್ಮಿಂಟನ್ ಅಕಾಡೆಮಿ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಶಿವರಾಮ ಏನೆಕಲ್ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾl ರವಿ ಕಕ್ಕೆಪದವು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲ್, ಜೆ ಸಿ ಐ ರಾಷ್ಟ್ರೀಯ ಪೂರ್ವ ನಿರ್ದೇಶಕ ಖಜಾಂಜಿ ಚಂದ್ರಶೇಖರ್ ನಾಯರ್, ಕುಕ್ಕೆಶಿ ಜೆಸಿ ಅಧ್ಯಕ್ಷ ಯೋಗನಾಥ್, ಜೆಸಿ ರೇಟ್ ಪೂರ್ವ ಅಧ್ಯಕ್ಷೆ ಗೀತಾ ರವಿಕಕ್ಯಪದವು, ಬ್ಯಾಡ್ಮಿಂಟನ್ ಶಿಬಿರದ ತರಬೇತುದಾರರಾಗಿ ಕಾರ್ತಿಕ್ ಕಕ್ಯಪದವು,
ಸುಬ್ರಹ್ಮಣ್ಯ ಆಟೋ, ಮಣಿಕಂಠ, ಸುಬ್ರಹ್ಮಣ್ಯ ಆತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.