ಎಣ್ಮೂರು ಗರಡಿಯಲ್ಲಿ ಪತ್ತನಾಜೆ ಕಾರ್ಯಕ್ರಮ

0

ಇತಿಹಾಸ ಪ್ರಸಿದ್ಧ ಎಣ್ಣೂರು ಶ್ರೀ ಕೋಟಿ ಚೆನ್ನಯ ಗರಡಿಯಲ್ಲಿ ಮೇ 25ರಂದು ಪತ್ತನಾಜೆ ಕಾರ್ಯಕ್ರಮ ನಡೆಯಿತು.


ಪತ್ತನಾಜೆಯಲ್ಲಿ ಬಾಗಿಲು ಹಾಕುವುದು, ಚೌತಿಯ ದಿನದಂದು ಬಾಗಿಲು ತೆರೆಯುವುದು ಪೂರ್ವ ಸಂಪ್ರದಾಯದಂತೆ ನಡೆದು ಬರುತ್ತಿದೆ.
ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ, ತಂಬಿಲ ಸೇವೆ, ದರ್ಶನ್ ಸೇವೆ, ಬೂಳ್ಯ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಪತ್ನಿ ಶ್ರೀಮತಿ ಪದ್ಮ ಆರ್ ಶೆಟ್ಟಿ, ಎನ್.ಜಿ.ಲೋಕನಾಥ ರೈ ಎಣ್ಮೂರು ಮತ್ತು ಕಟ್ಟ ಬೀಡು ಕುಟುಂಬಸ್ಥರು ಊರ ಭಕ್ತಾದಿಗಳು ಉಪಸ್ಥಿತರಿದ್ದರು.