ಕುಕ್ಕಟ್ಟೆ ಶ್ರೀಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಮುರುಳ್ಯ ಗ್ರಾಮದ ಕುಕ್ಕಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಳದ ಅನುವಂಶಿಕ ಆಡಳ್ತೇದಾರ ಲೀಲಾವತಿ ಚಿನ್ನಯ್ಯ ಆಚಾರ್ಯರು ದೇವಳದ ವತಿಯಿಂದ ಸ್ಮರಣಕ್ಕೆ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ದೇವಳದ ಪುರೋಹಿತ ಬಾಲಕೃಷ್ಣ ಆಚಾರ್ಯ, ಮುರುಳ್ಯ ಗ್ರಾ. ಪಂ. ಅಧ್ಯಕ್ಷೆ ಕು.ಜಾನಕಿ, ಉಪಾಧ್ಯಕ್ಷೆ ವನಿತಾ ಸುವರ್ಣ, ಸದಸ್ಯರಾದ ಮೋನಪ್ಪ ಅಲೇಕಿ, ಕರುಣಾಕರ ಹುದೇರಿ, ಶೀಲಾವತಿ ಗೋಳ್ತಿಲ, ಸುಂದರ ಶೇರ, ಪುಷ್ಪಾವತಿ ಕುಕ್ಕಟೆ, ಮುರುಳ್ಯ ಎಣ್ಮೂರು ಸೊಸೈಟಿ ಉಪಾಧ್ಯಕ್ಷೆ ಕುಸುಮಾವತಿ ರೈ ಕೆ. ಜಿ., ನಿರ್ದೇಶಕರಾದ ವಸಂತ ನಡುಬೈಲು, ರೂಪಾರಾಜ ರೈ ಕೆ., ಪುರುಷೋತಮ ಆಚಾರ್ಯ, ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಊರುಸಾಗು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.