ಮಂದ್ರಪ್ಪಾಡಿ : ಜನಾರ್ಧನ ಮಡಿವಾಳ ಕಾಣೆ – ಪೋಲೀಸ್ ದೂರು

0

ನೆಲ್ಲೂರು ಕೆಮ್ರಾಜೆ‌ ಗ್ರಾಮದ ಮಂದ್ರಪ್ಪಾಡಿ ಜನಾರ್ಧನ‌ ಮಡಿವಾಳ ಎಂಬವರು ಮೇ.5ರಿಂದ ಕಾಣೆಯಾಗಿರುವುದಾಗಿ ಅವರ ಪತ್ನಿ ಶೇಷಮ್ಮ ಎಂಬವರು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ.

ಮೇ. 5ರಂದು ಬೆಳಿಗ್ಗೆ 9 ಗಂಟೆಗೆ ಸುಳ್ಯಕ್ಕೆಂದು ಹೋದವರು ಆ ಬಳಿಕ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಅವರ ಸಂಚಾರಿ ದೂರವಾಣಿ ಸಂಖ್ಯೆ ಸ್ವಿಚ್ ಆಫ್ ಎಂದು ಬರುತ್ತಿದೆ. ಅವರನ್ನು ಹುಡುಕಿ ಕೊಡುವಂತೆ ಶೇಷಮ್ಮ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.