ನಿಡ್ಮಾರು ಶ್ರೀ ವಿಶ್ವಕರ್ಮ ಭಜನಾ ಮಂಡಳಿ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ

0

ಕೊಡಿಯಾಲ ಗ್ರಾಮದ ನಿಡ್ಮಾರು ಶ್ರೀ ವಿಶ್ವಕರ್ಮ ಭಜನಾ ಮಂಡಳಿ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯರಿಗೆ ಸನ್ಮಾನ ಕಾರ್ಯಕ್ರಮ ಜು 9 ರಂದು ನಡೆಯಿತು.

ಸಭಾಧ್ಯಕ್ಷತೆಯನ್ನು ಮಂಡಳಿ ಅಧ್ಯಕ್ಷ ಕೆ. ಎಚ್. ಮಧುಚಂದ್ರ ಪಂಜ ವಹಿಸಿದ್ದರು. ವೇದಿಕೆಯಲ್ಲಿ ಮಂಡಳಿಯ ಗೌರವ ಸಲಹೆಗಾರರಾದ ಲಿಗೋದರ ಆಚಾರ್ಯ ಪಂಜ, ಪ್ರಮೋದ್ ಕುಮಾರ್ ರೈ ನಿಡ್ಮಾರು, ಗೌರವಾಧ್ಯಕ್ಷ ಶೇಷಪ್ಪ ಆಚಾರ್ಯ ನಿಡ್ಮಾರು, ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಾಥ್ ರೈ ಬಾಳಿಲ, ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಕೊಡಿಯಾಲ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಬಾಚೋಡಿ ಉಪಸ್ಥಿತರಿದ್ದರು.

ಹರಿನಾರಾಯಣ ಕಳಂಜ ಪ್ರಾರ್ಥಸಿದರು. ಮಂಡಳಿ ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ. ಆರ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕರುಣಾಕರ ಮರಿಕೆಯಿ, ಕೊಡಿಯಾಲ ಶಾರದೋತ್ಸವ ಸಮಿತಿ ಅಧ್ಯಕ್ಷರು ಹರೀಶ್ ಕಲ್ಲಪಣೆ ಮತ್ತು ಸದಸ್ಯರು, ಅಗ್ನಿ ಗುಳಿಕ ಭಕ್ತವೃಂದ ನಿಡ್ಮಾರು ಇದರ ಅಧ್ಯಕ್ಷ ಮತ್ತು ಸದಸ್ಯರು, ಸುಧಾಕರ ರೈ ಬಜನಿ, ರಾಮಚಂದ್ರ ನಿಡ್ಮಾರು, ಕೃಷ್ಣ ರೈ ಬಜನಿ, ಕೆ ಕೆ ನಾಯ್ಕ ಸಾಗುಮನೆ, ವೆಂಕಪ್ಪ ನಿಡ್ಮಾರು, ಭವಾನಿ ಶಂಕರ್ ದರ್ಖಾಸು, ಲಕ್ಷಣ ಗೌಡ ಗುತ್ತಿನ ಮನೆ, ಮಂಡಳಿ ಸದಸ್ಯರಾದ ಹರಿನಾರಾಯಣ ಕಳಂಜ, ದಿನೇಶ್ ಬಾಬೋಡಿ, ಅರುಣಾಕ್ಷಿ ನಿಡ್ಮಾರು, ಸುಲೋಚನಾ ಪಂಜ, ಮತ್ತು ಅನೇಕ ಬಂಧುಗಳು ಉಪಸಿತರಿದ್ದರು. ವೇದಿಕೆಯಲ್ಲಿದ್ದವರು ಮಂಡಳಿಯ ಕಾರ್ಯಗಳನ್ನು ಪ್ರಶಂಶಿಸಿದರು.

ಶಾಸಕಿಯವರು ಮಂಡಳಿಯ ಎಲ್ಲಾ ಕೆಲಸಗಳಿಗೂ ಸ್ಪಂದಿಸುದಾಗಿ ಹೇಳಿದರು. ನೆಟ್ವರ್ಕ್ ನ ಸಮಸ್ಯೆಗೆ ಅಗ್ನಿಗುಳಿಕ ಭಕ್ತ ವೃಂದದವರು ಶಾಸಕರಿಗೆ ಮನವಿ ನೀಡಿದರು.