ಅರಂಬೂರು ಹಾಲು ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ

0

ಅರಂಬೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ೨೦೨೨ -೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ.ಬಿ ಭಾರದ್ವಾಜ ಇವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ಜು 12 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ರೋ| ಬಾಪೂ ಸಾಹೇಬ್, ರಾಜ್ಯ ಪ್ರಶಸ್ತಿ ಪಡೆದ ದಿವಾಕರ ಮಾಸ್ತರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿಯವರು ಹಾಗೂ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯ. ಬಿ ಭಾರದ್ವಾಜ ಮತ್ತು ಉಪಾಧ್ಯಕ್ಷೆ ಶ್ರೀಮತಿ ಶ್ಯಾಮಲಾ ಪದ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಶ್ರೀಮತಿ ಸಂಧ್ಯಾ.ಜೆ ಭಾರಧ್ವಾಜ, ಶ್ರೀಮತಿ ದಾಕ್ಷಾಯಿಣಿ ನಾಯರ್, ಶ್ರೀಮತಿ ವನಿತಾ ಭಾರದ್ವಾಜ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಖುಷಿರ್ದಾಬಾನು, ಶ್ರೀಮತಿ ಕವಿತಾ, ಶ್ರೀಮತಿ ಯಶೋದ ಐತಪ್ಪ ನಾಯ್ಕ, ಶ್ರೀಮತಿ ಶ್ಯಾಮಲಾ ವಿಷ್ಣು ಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಶ್ಯಾಮಲಾ ಪದ್ಮಯ್ಯ ದೇವತಾ ಪ್ರಾರ್ಥನೆ ನೆರವೇರಿಸಿ, ಶ್ರೀಮತಿ ಸಂಧ್ಯಾ ಜೆ ಭಾರಧ್ವಾಜ ಸ್ವಾಗತಿಸಿದರು. ಸಭೆಯಲ್ಲಿ ಸದಸ್ಯೆಯರಿಗೆ ಬೋನಸ್ ವಿತರಿಸಲಾಯಿತು. ಶ್ರೀಮತಿ ಉಷಾ ದಯಾನಂದ ರೈ ಆಡಳಿತ ವರದಿ ವಾಚಿಸಿದರು. ಶ್ರೀಮತಿ ಡಾ. ರೋಹಿಣಿ ಭಾರಧ್ವಾಜರವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಮಿಟಿಯ ವತಿಯಿಂದ ಅಧ್ಯಕ್ಷೆ ಸೌಮ್ಯ ಭಾರಧ್ವಾಜರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾಸ್ಕರ ನಾಯರ್ ಧನ್ಯವಾದ ಸಮರ್ಪಿಸಿದರು ಹಾಗೂ ಶ್ರೀಮತಿ ಚಂದ್ರಾವತಿ ಬದಿಕಾನ ಕಾರ್ಯಕ್ರಮ ನಿರೂಪಿಸಿದರು.