ಪಂಜ: ಬೊಳ್ಮಲೆಯಲ್ಲಿ ಹೆದ್ದಾರಿಗೆ ಆವರಿಸಿದ ಹೊಳೆ ನೀರು

0

ಭಾರಿ ಮಳೆಯಿಂದಾಗಿ ಪಂಜ ಹೊಳೆ ಉಕ್ಕಿ ಹರಿಯುತ್ತಿದ್ದು ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಜ ಸಮೀಪ ಬೊಳ್ಮಲೆಯಲ್ಲಿ
ಹೊಳೆ ನೀರಿನ ನೆರೆ ರಸ್ತೆಯಲ್ಲಿ ತುಂಬಿದ್ದು ಸುಬ್ರಹ್ಮಣ್ಯ- ಪಂಜ ವಾಹನ ಸಂಚಾರ ಜು.24 ರಂದು ಸಂಜೆ ಸ್ಥಗಿತಗೊಂಡಿದೆ.

ನೆರೆ ಮಧ್ಯೆ ಬಸ್ ಲಾರಿಯಂತ ದೊಡ್ಡ ವಾಹನಗಳು ಮಾತ್ರ ಸಂಚರಿಸುತ್ತಿವೆ. ಹೊಳೆ ಸಮೀಪದ ಕೃಷಿ ಭೂಮಿಗಳು ಮುಳುಗಡೆ ಗೊಂಡಿದೆ.ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಪಂಜ ಹೊಳೆಯ ಸೇತುವೆ ಮೇಲೆ ಹರಿವು ಆರಂಭಗೊಂಡಿದೆ. ಪಂಜ-ಕಡಬ ರಸ್ತೆಗೆ ಪುಳಿಕುಕ್ಕು ಎಂಬಲ್ಲಿ ಹೊಳೆ ನೀರು ಆವರಿಸಿ ಸಂಚಾರ ಸ್ಥಗಿತಗೊಂಡಿದೆ.


ನಿನ್ನೆಯ ಮಳೆಗೂ ಮುಂಜಾನೆಯಿಂದ ನೆರೆ ನೀರು ಆವರಿಸಿ ಸಂಜೆ ತನಕ ವಾಹನ ಸಂಚಾರ ಸ್ಥಗಿತಗೊಂಡಿತ್ತು.