ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ಕವಿ ಗೋಷ್ಠಿಯಲ್ಲಿ ಚಂದ್ರಾವತಿ ರೈ ಪಾಲ್ತಾಡಿಯವರಿಂದ ಕವನವಾಚನ

0

ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್, ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ಜು. 30ರಂದು ಮಂಗಳೂರಿನಲ್ಲಿ ನಡೆದ ಭಾವೈಕ್ಯ ಸಮ್ಮಿಲನದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಮುರುಳ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ ಪಾಲ್ತಾಡಿಯವರು ಕವನ ವಾಚಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಇವರಿಗೆ ಕಾವ್ಯ ಸಿರಿ ಪ್ರಶಸ್ತಿ ನೀಡಲಾಯಿತು. ಇವರು ಈ ಮೊದಲು ಹಲವು ಬಾರಿ ವಿವಿಧ ಕಾರ್ಯಕ್ರಮಗಳಲ್ಲಿ ಸ್ವ ರಚಿತ ಕವನ ವಾಚನ ಮಾಡಿರುತ್ತಾರೆ.