ಸುಳ್ಯದ ಪತಂಜಲಿ ಯೋಗ ‌ಶಿಕ್ಷಣ ಸಮಿತಿಯಲ್ಲಿ‌ ಸ್ವಾತಂತ್ರ್ಯ ದಿನಾಚರಣೆ

0

ಉಪನ್ಯಾಸ – ದೇಶ ಭಕ್ತಿ ಗೀತೆಗಳ‌ ಗಾಯನ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಬಂಟರ ಭವನ ಶಾಖೆ ಸುಳ್ಯ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಪನ್ಯಾಸ ‌ಹಾಗೂ ದೇಶ ಭಕ್ತಿ ಗೀತೆ ಗಾಯನ ನಡೆಯಿತು.

ಬೆಳಗ್ಗೆ 5 ಗಂಟೆಗೆ ಯೋಗ ಶಿಕ್ಷಣ‌, ಅಮೃತ ವಚನ, ಪಂಚಾಗದ ಬಳಿಕ ಯೋಗ ತರಬೇತಿ ‌ನಡೆಯಿತು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೃಷಿಕರಾದ ಜಯರಾಮ ಬಾರಧ್ವಾಜರು ವಿಶೇಷ ಬೌದ್ಧಿಕ್ ನೀಡಿದರು.ಶ್ರೀಮತಿ ಸತ್ಯವತಿ,

ಕು.ಅವನಿ, ಸುಭಾಷ್ ಡಿ.ಕೆ., ಗಣೇಶ್ ‌ಬಿ.ಎಸ್., ರಾಜೇಶ್, ಪದ್ಮನಾಭ ‌ಜೈನ್ ರವರು ದೇಶ ಭಕ್ತಿ ಗೀತೆಗಳನ್ನು ‌ಹಾಡಿದರು.ಯೋಗ ಶಿಕ್ಷಕರಾದ ಶ್ರೀಮತಿ ಸುನಂದ ಹಾಗೂ ಯೋಗ ಬಂಧುಗಳು‌ ಉಪಸ್ಥಿತರಿದ್ದರು.