ಕೆ.ಎಸ್.ಆರ್.ಟಿ.ಸಿ ಮೆಕ್ಯಾನಿಕ್ ಹರೀಶ್ ಕುದ್ಪಾಜೆಗೆ ಉತ್ತಮ ಪ್ರಶಂಸನಾ ಪುರಸ್ಕಾರ

0

ಕೆ.ಎಸ್.ಟಿ.ಸಿ ಮೆಕ್ಯಾನಿಕಲ್ ಹರೀಶ್ ಕುದ್ಪಾಜೆ ಅವರು 2022 ನೇ ಸಾಲಿನಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮದಿಂದ ನೀಡಲಾಗುವ ಉತ್ತಮ ಪ್ರಶಂಸನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪುರಸ್ಕಾರವನ್ನು ಪುತ್ತೂರು ಘಟಕದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಲಾಯಿತು. ಇವರು ಪುತ್ತೂರು ಘಟಕದ ಸುಳ್ಯ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಳ್ಯ ಉಬರಡ್ಕ ಗ್ರಾಮದ ಕುದ್ಪಾಜೆಯವರು.