ಮುರುಳ್ಯ : ನಟ್ಟಿಹಿತ್ಲು ಪ್ರಯಾಣಿಕರ ತಂಗುದಾಣ ಕೊಡುಗೆ

0

ಶಾಸಕಿ ಕು. ಭಾಗೀರಥಿಯವರಿಂದ ಉದ್ಘಾಟನೆ

ಮುರುಳ್ಯ ನಟ್ಟಿಹಿತ್ಲು ಶ್ರೀಮತಿ ಪೂವಮ್ಮ ಮತ್ತು ಉಕ್ಕಣರವರ ಸ್ಮರಣಾರ್ಥವಾಗಿ ಅವರ ಪುತ್ರರಾದ ನಟ್ಟಿಹಿತ್ಲು ಸೀತಾರಾಮ ಗೌಡ ಮತ್ತು ಮಕ್ಕಳು, ಗೋಪಾಲಕೃಷ್ಣ ಗೌಡ ಮತ್ತು ಮಕ್ಕಳು ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಆ. ೨೬ ರಂದು ಸುಳ್ಯ ಶಾಸಕಿ ಕು. ಭಾಗಿರಥಿ ಮುರುಳ್ಯರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುರುಳ್ಯ ಪಂಚಾಯತ್ ಅಧ್ಯಕ್ಷೆ ವನಿತಾ ಬಾಮೂಲೆ ಅಧ್ಯಕ್ಷತೆ ವಹಿಸಿದ್ದರು. ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಉಪಾಧ್ಯಕ್ಷೆ ಶ್ರೀಮತಿ ಚಿತ್ರ, ಮುರುಳ್ಯ ಗ್ರಾಮ ಪಂಚಾಯಿತ್ ಸದಸ್ಯ ಮೋನಪ್ಪ ಗೌಡ ಆಲೇಕಿ, ಕೇರ್ಪಡ ಮಹಿಷ ಮರ್ಧಿನಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು, ಕೊರಗಪ್ಪ ಗೌಡ ಚೆಮ್ನೂರು, ಮೋನಪ್ಪ ಗೌಡ ಕಡೀರ, ಭಾಸ್ಕರ ಗೌಡ ನಳಿಯಾರು, ಪದ್ಮಾವತಿ ನಟ್ಟಿಹಿತ್ಲು ವಸಂತಿ ನಟ್ಟಿಹಿತ್ಲು, ವಸಂತ ಕೆ.ಇ.ಬಿ, ಕೇಶವ ಗೋಳ್ತಿಲ, ಚಂದ್ರಶೇಖರ ಪಂಬೆತ್ತಾಡಿ, ಕೃಷ್ಣಕುಮಾರ್ ಹುಲಿಮನೆ, ಬಾಲಕೃಷ್ಣ ಮಧ್ಕೂರು, ಮಾಯಿಲಪ್ಪ ಗೌಡ, ಆನಂದ ಸುವರ್ಣ, ಭುವನ್ ಕುಮಾರ್, ಭರತ್ ನೆಟ್ಟಿಹಿತ್ಲು, ಅಶೋಕ್ ನೆಟ್ಟಿಹಿತ್ಲು, ಸಂಪ್ರೀತ್ ಕಡೀರ, ಭುವನೇಶ್ವರ ಪೂದೆ, ಅನೂಪು ಬಿಳಿಮಲೆ, ವಿಠಲ ಗೌಡ ಕಡೀರ, ಬಾಲಕೃಷ್ಣ ಗೌಡ ಆಲೇಕಿ ಇನ್ನಿತರರು ಉಪಸ್ಥಿತರಿದ್ದರು.

ಪುಷ್ಪಾವತಿ ನಿಕೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಂದನಾ ನೆಟ್ಟಿಹಿತ್ಲು ಸ್ವಾಗತಿಸಿದರು. ವಂದನಾ, ಸತ್ಯವತಿ, ಹೇಮಲತ, ಸೌಜನ್ಯ ಕಡೀರ ಪ್ರಾರ್ಥಿಸಿದರು. ಅರುಣ ನಟ್ಟಿಹಿತ್ಲು ವಂದಿಸಿದರು.