ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ ಗಾಣಿಗ ಸಮ್ಮಿಲನದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಇದರ ವಾರ್ಷಿಕ ಮಹಾಸಭೆ ಹಾಗೂ ಗಾಣಿಗ ಸಮ್ಮೇಳನ
2023 ಅ.1 ರಂದು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಆ. 27 ರಂದು ಅಜ್ಜಾವರದ ಕರ್ಲಪ್ಪಾಡಿ ಪಕೀರ ಪಾಟಾಳಿ ಯವರ ಗಾಣದ ಮನೆಯಲ್ಲಿ ನಡೆಯಿತು.

ಹಿರಿಯರಾದ ಪಕೀರ ಪಾಟಾಳಿ ಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ್ ಉದ್ದಂತಡ್ಕ, ಸಂಘದ ಕಾರ್ಯದರ್ಶಿ ಸುರೇಶ್ ಕರ್ಲಾಪ್ಪಾಡಿ, ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು,
ಸಂಘದ ಆಂತರಿಕ ಲೆಕ್ಕಪರಿಶೋಧಕ ಮಹಾಲಿಂಗಂನ್ ಬಾಜರ್ ತೊಟ್ಟಿ, ರಮೇಶ್ ಇರಂತ ಮಜಲು, ವೆಂಕಟ್ರಮಣ ಬೇರ್ಪಡ್ಕ, ರಾಧಾಕೃಷ್ಣ ಬೇರ್ಪಡ್ಕ, ಉದಯರವಿ ಕಲ್ಚಾರು, ಸೀತಾರಾಮ ಶಾಂತಿಮಜಲು, ಪ್ರವೀಣ್ ಜಯನಗರ, ಉದಯ ಕರ್ಲಪ್ಪಾಡಿ,
ವಿಜಯಕುಮಾರ್ ಎರ್ಮೆಟ್ಟಿ, ಕೇಶವ ಮೊರಂಗಲ್ಲು, ಬಾಬು ಕರ್ಲಪ್ಪಾಡಿ, ಸೀತಾರಾಮ ಕರ್ಲಪ್ಪಾಡಿ, ಶಿವಪ್ರಸಾದ್ ಪೇರಾಲು, ಮಿಥುನ್ ಕರ್ಲಪ್ಪಾಡಿ,
ವಿಶಾಲಾಕ್ಷಿ ಕರ್ಲಪ್ಪಾಡಿ, ದೇವಕಿ ಕರ್ಲಪ್ಪಾಡಿ, ದೇವಿಕಾ ಕರ್ಲಪ್ಪಾಡಿ, ಜಯಂತಿ ಕರ್ಲಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಘದಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಸ್ವಾಗತಿಸಿದರು.
ರಮೇಶ್ ಇರಂತಮಜಲು ವಂದಿಸಿದರು. ಸಂಚಾಲಕ ಪ್ರವೀಣ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.