ಗುರು ನಮನ : ಉತ್ತಮ ಜ್ಞಾನ ಭಂಡಾರದ ಗುರು

0

ಮಧುಶ್ರೀ ಕುಲಾಲ್

ಅಂದು ನಾನು ಪ್ಯಾರಾಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ ಮಡಿಕೇರಿ ಮೆಡಿಕಲ್ ಕಾಲೇಜು ಗೆ ದಾಖಲಾಗಿದ್ದೆ. ನನ್ನ ಮೊದಲ ದಿನದ ಕ್ಲಾಸ್ ಹೇಗಿರುತ್ತೋ ಏನೋ ಎಂದು ಭಾವಿಸಿ ತರಗತಿಗೆ ನಡೆದೆ. ಆ ದಿನದ ತರಗತಿ ಫಾರ್ಮಕಲಜಿ. ಅಂದು ನನಗೆ ತರಗತಿ ತೆಗೆದುಕೊಂಡ ಗುರುಗಳು ಡಾ | ರವಿ ಮುಂಡಕಜೆ ಯವರು . ಒಂದು ಹೆಮ್ಮೆ ನಮ್ಮ ಸುಳ್ಯ ದವರು ಎಂದು. ಅಂದು ನಾನು ಕಂಡ ಅತ್ಯಂತ ಸರಳ ಹಾಗೂ ನಗುಮುಗದ ಗುರು ಇವರು ಸುಂದರವಾಗಿ ಪಾಠ ಮಾಡುವರು. ಮೆಡಿಕಲ್ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರು ಆಗಿದ್ದರು. ಉತ್ತಮ ಜ್ಞಾನ ಭಂಡಾರ ಹೊಂದಿದ್ದ ಇವರು,ನನ್ನ ಉನ್ನತ ವಿದ್ಯಾಭ್ಯಾಸ ಕ್ಕೆ ಸಹಾಯ ಮಾಡಿದರು. ಇವರ ಮಾರ್ಗದರ್ಶನದಲ್ಲಿ ಇಂದು ಉತ್ತಮ ತಂತ್ರಜ್ಞೆಯಾಗಿರುವೆ ಎಂಬ ಹೆಮ್ಮೆ ನನ್ನದು. ಈ ಗುರುವಿಗೆ ನನ್ನ ನಮನಗಳನ್ನು ಅರ್ಪಿಸಲು ನನಗೆ ತುಂಬಾ ಖುಷಿಯಾಗಿದೆ.

ಮಧುಶ್ರೀ ಕುಲಾಲ್