ಚಿಕಿತ್ಸೆಗೆ ಹಣವಿಲ್ಲದೆ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ಕುಟುಂಬ

0

ಕಾಂಗ್ರೆಸ್ ಅಡ್ಪಂಗಾಯ ವಾರ್ಡ್ ಸಮಿತಿ ಖರ್ಚಿಗೆ ಹಣ ನೀಡಿ ಮರಳಿ ಆಸ್ಪತ್ರೆಗೆ ದಾಖಲು

ಅಜ್ಜಾವರ ಗ್ರಾಮದ ಅಡ್ಪಂಗಾಯ ಮಾವಿನಪಳ್ಳ ನಿವಾಸಿ ದಿವಂಗತ ಅಂಬೊಡಿಯವರ ಪುತ್ರ ಗಂಗಾಧರ ಎಂಬ ಯುವಕ ತೀವ್ರವಾದ ಹೊಟ್ಟೆ ನೋವಿನಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚುವರಿ ಚಿಕಿತ್ಸೆಗೆ ಸುಳ್ಯದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಅವರ ಕೈಯಲ್ಲಿ ಖರ್ಚಿಗೆ ಹಣವಿಲ್ಲದೆ ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ ಮನೆಗೆ ಮರಳಿರುವ ವಿಷಯ ಅಡ್ಪಂಗಾಯ ಕಾಂಗ್ರೆಸ್ ಕಾರ್ಯಕರ್ತರ ಗಮನಕ್ಕೆ ಬಂದಾಗ ತಕ್ಷಣ ಮನೆಗೆ ಹೋಗಿ ಸಂದರ್ಶಿಸಿದರು.


ಈ ಬಗ್ಗೆ ಕಾಂಗ್ರೆಸ್ ಅಡ್ಪಂಗಾಯ ವಾರ್ಡ್ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದು ತಕ್ಷಣ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ದಾಖಲಿಸಿ ಸಂಬಂಧ ಪಟ್ಟವರಲ್ಲಿ ಖರ್ಚಿಗೆ ಹಣ ನೀಡಿದ ಬಗ್ಗೆ‌ ವರದಿಯಾಗಿದೆ.

ಕಾಂಗ್ರೆಸ್ ಅಡ್ಪಂಗಾಯ ವಾರ್ಡ್ ಸಮಿತಿಯ ಈ ಮಾನವೀಯ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಯಿತು.