ಮುಳ್ಯ-ಅಟ್ಲೂರು : ಆಸ್ತಿ ವಿಚಾರದಲ್ಲಿ ಚಕಮಕಿ – ತಮ್ಮನಿಗೆ ಕಡಿದ ಅಣ್ಣ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಕುಂಚಡ್ಕ ಎಂಬಲ್ಲಿ ಆಸ್ತಿ ವಿಚಾರದಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಚಕಮಕಿ ನಡೆದು ಅಣ್ಣ ತಮ್ಮನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದು ಬಂದಿದೆ.
ಕತ್ತಿಯೇಟಿನಿಂದ ಗಾಯಗೊಂಡಿರುವ ರವಿಚಂದ್ರ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿದುಬಂದಿದೆ.
ಅ.1 ರಂದು ಆಸ್ತಿ ವಿಚಾರವಾಗಿ ಸಹೋದರೊಳಗೆ ಮಾತು‌ ಬೆಳೆಯಿತೆಂದೂ ಈ ವೇಳೆ ಅಣ್ಣ ಲವ ಕುಮಾರ್ ಎಂಬವರು ತಮ್ಮ ರವಿಚಂದ್ರ ಮೇಲೆ ಕತ್ತಿ ಬೀಸಿದರೆಂದು ಇದರಿಂದ ಗಾಯಗೊಂಡ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು. ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿರುವುದಾಗಿ ತಿಳಿದುಬಂದಿದೆ.