‘ನಮೋ‌ ಬ್ರಿಗೇಡ್ 2.0’ ಪ್ರಚಾರ ಆರಂಭ

0

ಕೋಲಾರದಿಂದ ಹೊರಟ ಬೈಕ್ ಜಾಥಾ ಸುಳ್ಯಕ್ಕೆ ಆಗಮನ – ಸ್ವಾಗತ

ಜನ ಗಣ ಮನ ಬೆಸೆಯೋಣ ನಮೋ ಬ್ರಿಗೇಡ್ 2.0 ಕೋಲಾರದಿಂದ ಹೊರಟ ಬೈಕ್ ಜಾಥಾ ಸುಮಾರು ಏಳು ಜಿಲ್ಲೆಗಳನ್ನು ದಾಟಿ ಅ.1 ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನ ಪ್ರವೇಶಿಸಿ ನಮ್ಮ ಸುಳ್ಯ ತಾಲೂಕಿಗೆ ಆಗಮಿಸಿತು. ಈ ವೇಳೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ನಮೋ ಬ್ರಿಗೇಡ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು.

ಇದರಲ್ಲಿ ಸುಮಾರು 12 ಬೈಕ್ ಗಳೊಂದಿಗೆ ಕೋಲಾರದಿಂದ ಹೊರಟ 23 ಜನ 15 ದಿನಗಳ ಕಾಲ ಕರ್ನಾಟಕದ ನಾನಾ ಜಿಲ್ಲೆಗಳನ್ನು ಭೇಟಿ ಮಾಡಿ ಮತ್ತೊಮ್ಮೆ ನರೇಂದ್ರ ಮೋದಿ ಅನ್ನುವ ಸಂಕಲ್ಪ ದೊಂದಿಗೆ ಯಾತ್ರೆ ನಡೆಯುತ್ತಿದೆ. ಅ.1ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಮೋ ಬ್ರಿಗೇಡ್ 2.0 ಸುಳ್ಯ ತಾಲೂಕಿನ ಕಾರ್ಯಕರ್ತರು ಮತ್ತು ಸಮಸ್ತ ರಾಷ್ಟ್ರ ಅಭಿಮಾನಿಗಳು ಸೇರಿ ಇವರನ್ನು ಸ್ವಾಗತಿಸಿ, ನೂರಾರು ಬೈಕ್ ಗಳ ಜೊತೆಗೂಡಿ ಸುಳ್ಯ ತಾಲೂಕಿನಿಂದ ಬೀಳ್ಕೊಡಲಾಯಿತು .

ಇದರ ಜೊತೆಗೆ ಎಲ್ಲಾ ನಮೋ ಬ್ರಿಗೇಡ್ 2.0 ಕಾರ್ಯಕರ್ತರು ಮತ್ತು ರಾಷ್ಟ್ರಅಭಿಮಾನಿಗಳು ಸೇರಿ ಸುಳ್ಯದ ಅಮರ ಶಿಲ್ಪಿ ಡಾ ಕುರಂಜಿ ವೆಂಕಟರಮಣ ಗೌಡ ಅವ GBರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಾತ್ರೆಯು ಪುತ್ತೂರಿನ ಕಡೆಗೆ ಸಾಗಿತು.

ಈ ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್ 2.0 ಪ್ರಮುಖರಾದ ಮನೀಶ್ ಗೂನಡ್ಕ, ಲೋಕೇಶ್ ಕೆರೆಮೂಲೆ, ಸತೀಶ್ ಕಾಟೂರು, ಪ್ರಶಾಂತ್ ಕುತ್ತಮೊಟ್ಟೆ, ರಾಜೇಶ್ ಕಿರಿಭಾಗ, ಭಜರಂಗದಳ ಪ್ರಮುಖ ಲತೀಶ್ ಗುಂಡ್ಯ, ಹಿಂ.ಜಾ.ವೇ ಪ್ರಮುಖ ಮಹೇಶ್ ಉಗ್ರಾಣಿಮನೆ, ಹಾಗೂ ನಮೋ ಬ್ರಿಗೇಡ್ ಪ್ರಮುಖ ಕಾರ್ಯಕರ್ತರು ಮತ್ತು ರಾಷ್ಟ್ರ ಅಭಿಮಾನಿಗಳು ಸೇರಿದ್ದರು.