ಗಾಂಧಿನಡಿಗೆಗೆ ಸಿಟಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಜಟ್ಟಿಪಳ್ಳದಲ್ಲಿ ಸ್ವಾಗತ

0

ಜಟ್ಟಿಪಳ್ಳ: ಗಾಂಧಿಜಯಂತಿ ಪ್ರಯುಕ್ತ ಗಾಂಧಿ ಚಿಂತನ ವೇದಿಕೆ ಸುಳ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಳ್ಯ ನಗರದಿಂದ ಕೊಡಿಯಾಲಬೈಲು ಗಾಂಧಿವನದವರೆಗೆ ಗಾಂಧಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ನೇತೃತ್ವ ವಹಿಸಿದ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಸಂಚಾಲಕರಾದ ಡಾ. ಸುಂದರ ಕೇನಾಜೆ, ಚಂದ್ರಶೇಖರ ಪೆರಾಲು, ದಿನೇಶ್ ಮಡಪ್ಪಾಡಿ, ಡಾ. ನಿತಿನ್ ಪ್ರಭು,, ಮುಂತಾದ ತಾಲ್ಲೂಕಿನ ಪ್ರಮುಖ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಟ್ಟಿಪಳ್ಳ ಕೊಡಿಯಾಲಬೈಲು ರಸ್ತೆ ಮುಖಾಂತರ ಗಾಂಧಿನಡಿಗೆಯಲ್ಲಿ ಗಾಂಧಿವನಕ್ಕೆ ಹೊರಟ ವಿದ್ಯಾರ್ಥಿಗಳಿಗೆ ಹಾಗೂ ಗಾಂಧಿಜಿ ಅಭಿಮಾನಿಗಳಿಗೆ,ಸಾರ್ವಜನಿಕರಿಗೆ ಸಿಟಿ ಫ್ರೆಂಡ್ಸ್ ಕ್ರೀಡಾ ಮತ್ತು ಕಲಾ ಸಂಘ (ರಿ.) ಜಟ್ಟಿಪಳ್ಳ ವತಿಯಿಂದ ಸಿಹಿ ತಿಂಡಿ ಹಾಗೂ ತಂಪು ಪಾನಿಯ ನೀಡಿ ಸ್ವಾಗತಿಸಲಾಯಿತು.

ಹಿರಿಯ ಸಮಾಜ ಸೇವಕ ಅಬೂಬಕರ್ ಮೇಸ್ತ್ರಿ ಪುಷ್ಪ ಚಿಮ್ಮಿಸಿ ಗಾಂಧಿ ನಡಿಗೆಗೆ ಸ್ವಾಗತ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಿ.ಎಫ್.ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್,ಸಿ ಎಫ್ ಸಿ ಜಟ್ಟಿಪಳ್ಳ ಇದರ ಸದಸ್ಯರು ಪದಾಧಿಕಾರಿಗಳು,ಸಹಕರಿಸಿದರು.
ತಂಪು ಪಾನೀಯಗಳು ಏರ್ಪಡಿಸಿದ್ದ ಕೌಂಟರ್ ಸಾಮಾಜಿಕ ಧುರೀಣರಾದ ನಿತ್ಯಾನಂದ ಮುಂಡೋಡಿ, ದೊಡ್ಡಣ್ಣ ಬರಮೇಲು,ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ ಸಿ ಜಯರಾಮ,ಸುಳ್ಯ ಪೊಲೀಸ್ ವೃತ ನಿರೀಕ್ಷರಾದ ಮೋಹನ ಕೊಠಾರಿ ಭೇಟಿ ನೀಡಿ ಶುಭ ಹಾರೈಸಿದರು.