ಸುಳ್ಯ ಗಿರಿದರ್ಶಿನಿಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ

0


ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆಯ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆಯ ಆಶ್ರಯದಲ್ಲಿ ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆದ ಸ್ಪೂರ್ತಿ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭ ಅ.2 ರಂದು ಸಂಜೆ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಮೋಹನ ಪೆರಾಜೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜೇಸಿಐ ನ ರಾಷ್ಟ್ರೀಯ ತರಬೇತುದಾರರಾದ ಡಾ.ಕೃಷ್ಣಮೂರ್ತಿ ಉಜಿರೆ, ವಲಯ ತರಬೇತುದಾರರಾದ ಸವಿತಾರ ಮುಡೂರು ಉಪಸ್ಥಿತರಿದ್ದು, ಮಾತನಾಡಿದರು.ಅತಿಥಿಗಳಾಗಿ ಜಾಲ್ಸೂರು ವಲಯ ಮೆಸ್ಕಾಂನ ಜಯಪ್ರಕಾಶ್ ಕಲ್ಚಾರು, ಮನ್ವಿತಾ ಹಾರ್ಡ್ ವೇರ್ ನ ಮಾಲಕ ಗೋಪಾಲಕೃಷ್ಣ ನಾಯ್ಕ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಮರಾಟಿ ಸಮಾಜದ ಅಧ್ಯಕ್ಷ ಜನಾರ್ದನ ಬಿ. ಕುರುಂಜಿಭಾಗ್, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕೋಶಾಧಿಕಾರಿ ಜನಾರ್ದನ ನಾಯ್ಕ್ ಕೇರ್ಪಳ, ನಿರ್ದೇಶಕ ಧರ್ಮಣ್ಣ ನಾಯ್ಕ್ ಗರಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಶ್ರೀಮತಿ ಮಾಲತಿ ರವಿ ಬೀರಮಂಗಲ ಸ್ವಾಗತಿಸಿ, ಯುವ ವೇದಿಕೆಯ ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು ವಂದಿಸಿದರು. ಸುದ್ದಿ ವರದಿಗಾರ ದಯಾನಂದ ಕೊರತ್ತೋಡಿ ಕಾರ್ಯಕ್ರಮ ನಿರೂಪಿಸಿದರು.