ಕೂತ್ಕುಂಜ: ತರಬೇತಿ ಕಾರ್ಯಾಗಾರ

0

ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ ವತಿಯಿಂದ “ಸಭೆ ನಿರ್ವಹಣೆ’ ತರಬೇತಿ ಕಾರ್ಯಾಗಾರ ಅ.8 ರಂದು ಕೂತ್ಕುಂಜ ಶಾಲೆಯಲ್ಲಿ ಜರುಗಿತು.
ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ವನಿತಾ ಕಕ್ಯಾನ ಉದ್ಘಾಟಿಸಿದರು. ತರಬೇತುದಾರರಾಗಿ ಜೇಸಿಐ ವಲಯ ತರಬೇತುದಾರ ಶಶಿಧರ ಪಳಂಗಾಯ ಪಾಲ್ಗೊಂಡಿದ್ದರು.


‌ ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್ ಕುಳ್ಳಾಜೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಯುವಕ ಮಂಡಲದ ಕಾರ್ಯದರ್ಶಿ ಪ್ರಜ್ವಲ್ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಾರೋಪ ಸಮಾರಂಭದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕುಳ್ಳಾಜೆ ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು. ಚಿತೇಶ್
ಕಕ್ಯಾನ ವಂದಿಸಿದರು.