ಯುವಶಕ್ತಿ ಸಂಘ ಐವರ್ನಾಡು ವತಿಯಿಂದ ಶ್ರೀ ಶಾರದೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

0

ಯುವಶಕ್ತಿ ಸಂಘ ಐವರ್ನಾಡು, ಸಾರ್ವಜನಿಕರ ಸಹಕಾರದೊಂದಿಗೆ 19 ನೇ ವರ್ಷದ ಶ್ರೀ ಶಾರದೋತ್ಸವವು ಅ.21 ಮತ್ತು ಅ.22 ರಂದು ಐವರ್ನಾಡು ಸ.ಹಿ.ಪ್ರಾ.ಶಾಲೆಯ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಅ.09 ರಂದು ನಡೆಯಿತು.


ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ,ಅಧ್ಯಕ್ಷ ಜಯಪ್ರಕಾಶ್ ನೆಕ್ರೆಪ್ಪಾಡಿ,ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಟಿಕೇರಿ, ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಬಾಲಕೃಷ್ಣ ಮಡ್ತಿಲ,ಕರುಣಾಕರ ಮಡ್ತಿಲ, ವಿಜಯ್ ಮಡ್ತಿಲ, ರಮೇಶ್ ಮಿತ್ತಮೂಲೆ,ಪ್ರವೀಣ್ ಬಜಂತಡ್ಕ, ಮುರಳೀಧರ ಕೊಚ್ಚಿ,ಯಕ್ಷಿತ್ ಮಡ್ತಿಲ, ಅಶ್ವಥ್ ಜಬಳೆ,ಕುಶಾಲಪ್ಪ ಕೇಮಾಜೆ,ಹೊನ್ನಪ್ಪ ಅಂಬೆಕಲ್ಲು,ಪ್ರದೀಪ್ ಮಚಾದೋ,ರಾಜೇಶ್ ನೆಕ್ರೆಪ್ಪಾಡಿ,ಪುಣ್ಯಪ್ರಸಾದ್ ಮಿತ್ತಮೂಲೆ,ಚೇತನ್ ಮಿತ್ತಮೂಲೆ ಉಪಸ್ಥಿತರಿದ್ದರು.