ನನ್ನ ಮಣ್ಣು ನನ್ನ ದೇಶ ದೆಹಲಿ ಕಾರ್ಯಕ್ರಮಕ್ಕೆ ಜಯರಾಜ್ ಕುಕ್ಕೆಟ್ಟಿ, ಶಿವಪ್ರಸಾದ್ ನಡುತೋಟ

0

ಪ್ರಧಾನಿ ನರೇಂದ್ರ ‌ಮೋದಿಯವರ ಕಲ್ಪನೆಯ ನನ್ನ ದೇಶ ನನ್ನ ಮಣ್ಣು ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಳ್ಯ‌ ಬಿಜೆಪಿ ಮಂಡಲ ಸಮಿತಿ ವತಿಯಿಂದ ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ ಹಾಗೂ ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ ಭಾಗವಹಿಸಲಿದ್ದಾರೆ.

ಸುಳ್ಯ ತಾಲೂಕಿನಿಂದ ಈಗಾಗಲೇ ಸಂಗ್ರಹ ಮಾಡಲಾಗಿರುವ (ಮಣ್ಣು) ಅಮೃತ ಕಲಶವನ್ನು ಇವರು ದೆಹಲಿಗೆ ಕೊಂಡುಹೋಗಿ ಅಲ್ಲಿ ಮಾಡಲುದ್ದೇಶಿಸಿರುವ ಯೋಧರ ಸ್ಮಾರಕಕ್ಕೆ ಸಮರ್ಪಣೆ ಮಾಡಲಿದ್ದಾರೆಂದು ತಿಳಿದುಬಂದಿದೆ.