ಮಂಡೆಕೋಲಿನಲ್ಲಿ ಕೃಷಿ ತೋಟಕ್ಕೆ ಮುಂದುವರಿದ ಆನೆ ದಾಳಿ : ಕೃಷಿ ಹಾನಿ

0

ಮಂಡೆಕೋಲು ಗ್ರಾಮದ ಉಗ್ರಾಣಿಮನೆ ಭಾಗದಲ್ಲಿ ಕೃಷಿ‌ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಕೃಷಿ‌ಹಾನಿಗೆಡವಿದ ಘಟನೆ ವರದಿಯಾಗಿದೆ.


ಉಗ್ರಾಣಿ ಮನೆ ರವೀಂದ್ರಕುಮಾರ್ ಯು. ಯಂ, ರಘುಪತಿ ಯು. ಯಂ., ಮೋಹನದಾಸ್ ಯು. ಯಂ., ಚೈತ್ರ ಪ್ರಸಾದ್ ಯು. ಯಂ, ಆನಂದ ಯು.ಯಂ., ಕೇಶವ ಯು. ಯಂ.ಮತ್ತು ಪುರುಷೋತ್ತಮ ಕುದುಕುಳಿ ಇತ್ಯಾದಿ ಜನರ ಕೃಷಿ ತೋಟಕ್ಕೆ ಸತತವಾಗಿ ನವೆಂಬರ್ ತಿಂಗಳ 2,3,4 ನೇ ತಾರೀಕಿಗೆ ಕಾಡಾನೆ ಗಳ ಹಿಂಡು ಧಾಳಿ ನಡೆಸಿ ತೆಂಗಿನಮರ, ಅಡಿಕೆ ಮರ, ಬಾಳೆ ಗಿಡಗಳನ್ನು ದ್ವಂಸಗೋಳಿಸಿರುತ್ತದೆ.

ಮಂಡೆಕೋಲು ಭಾಗದ ಹಲವು ಕಡೆಗಳಲ್ಲಿ ಒಂದು ತಿಂಗಳಿಂದ ನಿರಂತರವಾಗಿ ಆನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸುತಿದೆ.