ಆಗಂತುಕನೊಬ್ಬ ಆಂಜನೇಯ ಗುಡಿಯೊಳಗೆ ಬಂದಿದ್ದು ನಿಜ ; ಕಳ್ಳತನ ವಾಗಿಲ್ಲ – ಸುಬ್ರಹ್ಮಣ್ಯ ಎಸ್. ಐ ಸ್ಪಷ್ಟನೆ

0

ಸುಬ್ರಹ್ಮಣ್ಯದ ಆಂಜನೇಯ ಗುಡಿಯಲ್ಲಿ ನ.9 ರಂದು ರಾತ್ರಿ ಕಳ್ಳತನ ನಡೆದಿರುವುದಾಗಿ ವರದಿಯಾಗಿದ್ದು; ” ಆಗಂತುಕನೊಬ್ಬ ಗುಡಿಯೊಳಗೆ ಬಂದಿದ್ದು ನಿಜ. ಕಳ್ಳತನ ವಾಗಿಲ್ಲ ಎಂದು ಸುಬ್ರಹ್ಮಣ್ಯ ಎಸ್. ಐ ಸ್ಪಷ್ಟನೆ ನೀಡಿದ್ದಾರೆ.

ಆಗಂತುಕನೊಬ್ಬ ರಾತ್ರಿ ವೇಳೆ ಗೇಟು ದಾಟಿ ಕಳ್ಳತನ ಮಾಡಲು ಯತ್ನಿಸಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದವರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಪೋಲೀಸರು ಹಾಗೂ ನಾನು ಹೋಗಿ ಪರಿಶೀಲನೆ ನಡೆಸಿದೆವು. ಆಗಂತುಕನೊಬ್ಬ ರಾತ್ರಿ ದೇವಸ್ಥಾನದೊಳಗೆ ಬಂದು, ದೇವರಿಗೆ ಕೈ ಮುಗಿದು, ಡ್ರವರ್ ಎಳೆದು ನೋಡುವುದೆಲ್ಲ ಇದೆ. ಆದರೆ ಏನೂ ಕಳ್ಳತನ ನಡೆದಿಲ್ಲ. ಆತ ಅಮಲು ಪದಾರ್ಥ ಸೇವಿಸಿದಂತೆ ಕಾಣುತ್ತದೆ. ಕಳ್ಳತನಕ್ಕೆ ಬಂದವನಾಗಿದ್ದರೆ ಒಂದೂವರೆ ಗಂಟೆ ದೇವಳದೊಳಗಿರುತ್ತಿರಲಿಲ್ಲ ” ಎಂದು ಎಸ್.ಐ.ಯವರು ಸುದ್ದಿಯೊಡನೆ ಮಾತನಾಡುತ್ತಾ ಹೇಳಿದರು.