ಸುಳ್ಯ ನಗರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಗೋರಕ್ಷಾ ವಿಭಾಗದ ವತಿಯಿಂದ ಗೋಪೂಜಾ ಕಾರ್ಯಕ್ರಮ

0

ಗೋವುಗಳಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ ರಾಜಶೇಖರನಾಂದ ಸ್ವಾಮೀಜಿ

ಸುಳ್ಯ ನಗರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಗೋರಕ್ಷಾ ವಿಭಾಗದ ವತಿಯಿಂದ ಹಮ್ಮಿಕೊಂಡ ಸಾಮೂಹಿಕ ಗೋಪೂಜಾ ಕಾರ್ಯಕ್ರಮವು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿರುವ ಸ್ವರ್ಗಿಯ ಗುರುಕೃಷ್ಣ ವೇದಿಕೆಯಲ್ಲಿ ನ.18 ರಂದು ಸಂಧ್ಯಾ ಕಾಲದಲ್ಲಿ ನಡೆಯಿತು.


ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಗೋವುಗಳಿಗೆ ಆರತಿಯನ್ನು ಬೆಳಗಿ ತಿನಿಸು ನೀಡಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ
ಶ್ರೀಮತಿ ಲತಾ ಮಧುಸೂಧನ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ, ಲತೀಶ್ ಗುಂಡ್ಯ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.