ನಿಂತಿಕಲ್ಲು : ಮಹಿಳೆಗೆ ಜಾತಿ ನಿಂದನೆ,ಕೊಲೆ ಬೆದರಿಕೆ ಆರೋಪ – ಪ್ರಕರಣ ದಾಖಲು

0

ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನಿನ ವಿಚಾರಕ್ಕೆ ಸಂಬದಪಟ್ಟು ಮಹಿಳೆಯೋರ್ವರಿಗೆ ವ್ಯಕ್ತಿಯೋರ್ವರು ಜಾತಿ ನಿಂದನೆ ,ಕೊಲೆ ಬೆದರಿಕೆ ಹಾಕಿರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.


ಚೋಮಣ್ಣ ನಾಯ್ಕ ಎಂಬವರು ತಿಮ್ಮಪ್ಪ ಗೌಡ ಎಂಬವರ ವಿರುದ್ಧ ದೂರು ನೀಡಿದ್ದು
ದೂರಿನಲ್ಲಿ ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಸರ್ವೆ ನಂ 270/3 ರಲ್ಲಿ 0.05 ಎಕ್ರೆ ಜಮೀನು ಹೊಂದಿ ಜಮೀನಿನಲ್ಲಿ ಸಣ್ಣ ಹೊಟೇಲು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ.


ನನ್ನ ಜಮೀನಿಗೆ ಹೊಂದಿಕೊಂಡಿರುವ ಸರ್ವೆ ನಂ 270/1 ರಲ್ಲಿ ಕಟ್ಟಡವನ್ನು ಹೊಂದಿರುವ ತಿಮ್ಮಪ್ಪ ಗೌಡ ಎಂಬವರು ನಮ್ಮ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಸುಮಾರು ಒಂದು ವರ್ಷದಿಂದಲೂ ನಾನಾ ರೀತಿಯ ಕಿರುಕುಳ, ಕೊಲೆ ಬೆದರಿಕೆ ಹಾಕುತ್ತಾ ಬಂದಿರುತ್ತಾರೆ. ದಿನಾಂಕ 15-12-2023 ರಂದು 11-00 ಗಂಟೆಗೆ ತಿಮಪ್ಪ ಗೌಡರು ಹೊಟೇಲ್ ಬಳಿ ಬಂದು ನನ್ನ ಪತ್ನಿ ಬೇಬಿಯನ್ನು ಉದ್ದೇಶಿಸಿ “ ನೀನು ಮರ್ಯಾದೆಯಲ್ಲಿ ನಿನ್ನ ಜಾಗವನ್ನು ನನಗೆ ಬಿಟ್ಟು ಕೊಡಬೇಕು, ನೀನು ನನಗೆ ಲೆಕ್ಕವೇ ಇಲ್ಲ,ಎಂದು ಜಾತಿನಿಂದನೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ ಕತ್ತಿ ಹಿಡಿದು ಕಡಿದು ಕೊಲ್ಲುವುದಾಗಿ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.