ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವದ ಪೂರ್ವ ಸಿದ್ಧತಾ ಸಭೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಕಾರ್ಯಕ್ರಮ ಫೆ.13,14 ಮತ್ತು 14 ರಂದು ನಡೆಯಲಿದ್ದು ಪೂರ್ವ ಭಾವಿ ಸಭೆಯು ಸಮಿತಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರ ಅಧ್ಯಕ್ಷತೆಯಲ್ಲಿ ಜ.2 ರಂದು ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.


ಮೂರು ದಿನಗಳು ನಡೆಯಲಿರುವ ಮಹೋತ್ಸವದ ಯಶಸ್ಸಿಗಾಗಿ ಉಪ ಸಮಿತಿ ಸದಸ್ಯರಿಗೆ ಜವಬ್ದಾರಿ ಹಂಚಿಕೆ ಮಾಡಲಾಯಿತು.
ಉತ್ಸವದ ಆಮಂತ್ರಣ ಪತ್ರಿಕೆಯ ಮುದ್ರಣದ ಕುರಿತು ಅಂತಿಮ ಹಂತದ ಬದಲಾವಣೆಯ ಬಗ್ಗೆ ವಿಚಾರ ವಿಮರ್ಶೆ ಮಾಡಲಾಯಿತು. ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಹೊರ ತರಲಿರುವ ಸ್ಮರಣ ಸಂಚಿಕೆಯ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ
ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ಪ ಕೆ. ಎಸ್ ಕೆದಂಬಾಡಿ,
ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು,
ಕಾರ್ಯದರ್ಶಿಬಂಗಾರುಭಾರದ್ವಾಜ್, ಅರ್ಚಕ ಕೃಷ್ಣ ಭಟ್ ಅರಂಬೂರು,
ಪಂ.ಸದಸ್ಯ ಸುಧೇಶ್ ಅರಂಬೂರು,
ಕೋಶಾಧಿಕಾರಿ ನಾರಾಯಣ ನಾಯ್ಕ ಅರಂಬೂರು,
ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಮಜಿಗುಂಡಿ,
ಸಿರಿಕುರಲ್ ಕ್ಷೇತ್ರದ ಉತ್ಸವ ಸಮಿತಿ ಕಾರ್ಯದರ್ಶಿ ಜನಾರ್ದನ ಚೊಕ್ಕಾಡಿ ಸಿರಿಕುರಲ್,
ಉಪ ಕಾರ್ಯದರ್ಶಿ ಪುಷ್ಪರಾಜ್ ಕುಲಾಲ್,ಮಂದಿರದ ಕಾರ್ಯದರ್ಶಿ ಪ್ರೀತಿಕ್ ಕುಲಾಲ್ ಮಜಿಗುಂಡಿ, ಸ್ಮರಣ ಸಂಚಿಕೆ ಸಂಪಾದಕ ಕುಮಾರ ಸ್ವಾಮಿ ತೆಕ್ಕುಂಜ, ವಸಂತ ಮಾಸ್ತರ್ , ರಾಮ ಭಟ್ ಮಜಿಗುಂಡಿ, ಪದ್ಮಯ್ಯ ಗೌಡ ಪಡ್ಪು, ಹೇಮಂತ್ ಕುಮಾರ್, ರಾಜಶೇಖರ ಕಣಕ್ಕೂರು, ಉಮೇಶ್ ಮಜಿಗುಂಡಿ ಹಾಗೂ ಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.