ಆಲೆಟ್ಟಿ : ಜಾತ್ರೋತ್ಸವದ ಪ್ರಯುಕ್ತ ಶ್ರೀ ಮಹಾಮ್ಮಾಯಿ ಮರಾಟಿ ಯುವ ವೇದಿಕೆ ಆಲೆಟ್ಟಿ ವತಿಯಿಂದ ಶ್ರಮದಾನ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ವಠಾರದಲ್ಲಿ “ಶ್ರೀ ಮಹಮ್ಮಾಯಿ ಮರಾಟಿ ಯುವ ವೇದಿಕೆ ಆಲೆಟ್ಟಿ” ಇದರ ಸದಸ್ಯರಿಂದ ಕಳೆ ತೆಗೆಯುವ ಸ್ವಚ್ಛತಾ ಕಾರ್ಯಕ್ರಮವು ದಜ.14ರಂದು ನಡೆಯಿತು. ಈ ಕಾರ್ಯದಲ್ಲಿ ನಮ್ಮೊಂದಿಗೆ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ತೀರ್ಥಕುಮಾರ್ ಕುಂಚಡ್ಕ ಮತ್ತು ಸಮಿತಿಯ ಕಾರ್ಯದರ್ಶಿಯಾದ ರಾಮಚಂದ್ರ ಆಲೆಟ್ಟಿ ಹಾಗೂ ಹರಿಪ್ರಸಾದ್ ಗಬ್ಬಲ್ಕಜೆ ಉಪಸ್ಥಿತರಿದ್ದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ದೇರಣ್ಣ ನಾಯ್ಕ ಮಾಣಿಮರ್ದು, ಆನಂದ ತಲೇಪಳ್ಳ, ದಿನೇಶ್ ಕುಮಾರ್ ಏಣಾವರ, ವಿಶ್ವನಾಥ ಮೂಲೆಬಡ್ಡಡ್ಕ, ಶಿವರಾಜ್ ರಂಗತ್ತಮಲೆ, ಸುದೀನ್ ತಲೇಪಳ್ಳ,ಪುರುಷೋತ್ತಮ ರಂಗತ್ತಮಲೆ, ಚಂದ್ರ ಮೂಲೆಬಡ್ಡಡ್ಕ, ಸತೀಶ್ ರಂಗತ್ತಮಲೆ, ಕೌಶಿಕ್ ಮಾಣಿಮರ್ದು, ಪದ್ಮನಾಭ ಕಲ್ಲೆಂಬಿ, ವಿನೀತ್ ಬೊಳ್ಳೂರು, ಸಂದೇಶ್ ರಂಗತ್ತಮಲೆ ಹಾಗೂ ಯಶವಂತ ಬಾಳೆಬಳ್ಪು ಸಹಕರಿಸಿದರು.