ಪಂಜ:ನೆಕ್ಕಿಲ ದೈವಸ್ಥಾನದಲ್ಲಿ ಭಕ್ತಿ ಸಂಭ್ರಮದ ಪ್ರತಿಷ್ಠಾ ವಾರ್ಷಿಕೋತ್ಸವ- ನೇಮೋತ್ಸವ

0

ಪಂಜದ ನೆಕ್ಕಿಲ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವವು.ಜ.15 ರಂದು ಭಕ್ತಿ ಸಂಭ್ರಮದಿಂದ ನಡೆಯಿತು.

ಜ.15 ರಂದು ಮುಂಜಾನೆ ಶ್ರೀ ವಾಸುಕಿ ನಾಗರಾಜ ದೇವರ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ, ನವಕ ಕಲಶ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ ,ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ ವಾಚನ, ಗಣಪತಿ ಹೋಮ, ನವಕ ಕಲಶ, ಕಲಶಾಭಿಷೇಕ , ತಂಬಿಲಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ದೈವಗಳಿಗೆ ತಂಬಿಲ ಹಾಗೂ ಭಂಡಾರ ತೆಗೆದು, ಶ್ರೀ ರಕ್ತೇಶ್ವರಿ ದೈವದ ನೇಮ -ಬಟ್ಟಲು ಕಾಣಿಕೆ , ವರ್ಣರಪಂಜುರ್ಲಿ ಹಾಗೂ ಗುಳಿಗ ದೈವದ ನೇಮ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ, ಗೌರವಾಧ್ಯಕ್ಷ ವಿಷ್ಣು ಭಟ್ ಪೈಂದೋಡಿ, ಉತ್ಸವ ಸಮಿತಿ ಸಂಚಾಲಕ ಚಿನ್ನಪ್ಪ ಸಂಕಡ್ಕ, ಆಡಳಿತ ಮಂಡಳಿ ಕಾರ್ಯದರ್ಶಿ ಪುರುಷೋತ್ತಮ ನೆಕ್ಕಿಲ, ಖಜಾಂಜಿ ದೇವಿಪ್ರಸಾದ್ ಜಾಕೆ, ಸದಸ್ಯರು, ಉತ್ಸವ ಸಮಿತಿ ಸಂಚಾಲಕರು, ಸದಸ್ಯರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.