ಸುಳ್ಯ ಸಿ.ಎ. ಬ್ಯಾಂಕ್ ಸಾಮಾನ್ಯ ಸಭೆ

0

ಸುಳ್ಯ ಸಿ.ಎ.ಬ್ಯಾಂಕ್ ನ ನೂತನ ಅಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯು ಜ.16ರಂದು‌ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ಸಿಗದಿರುವುದರಿಂದ ಅಸಮಾಧಾನಗೊಂಡು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್.ಎ. ರಾಮಚಂದ್ರರು ರಾಜೀನಾಮೆ ಹಿಂತೆಗೆದುಕೊಂಡಿದ್ದು, ನಿನ್ನೆಯ ಸಾಮಾನ್ಯ ಸಭೆಯಲ್ಲಿ ಅವರು ‌ಭಾಗವಹಿಸಿದ್ದರು.

ಕೆಲ ಹೊತ್ತು ಸಾಮಾನ್ಯ ಸಭೆಯಲ್ಲಿ ಕುಳಿತಿದ್ದ ಅವರು ಸಹಿ ಮಾಡಿ ತೆರಳಿದರೆಂದು ತಿಳಿದುಬಂದಿದೆ.

ಉಪಾಧ್ಯಕ್ಷ ಚಂದ್ರಶೇಖರ ನಡುಮನೆ, ನಿರ್ದೇಶಕರಾದ ವೆಂಕಟರಮಣ ಮುಳ್ಯ, ಹೇಮಂತ್ ಕಂದಡ್ಕ, ಬಾಲಗೋಪಾಲ ಸೇರ್ಕಜೆ, ಪ್ರಬೋದ್ ಶೆಟ್ಟಿ ಮೇನಾಲ, ವಾಸುದೇವ ಪುತ್ತಿಲ, ಚಂದ್ರಶೇಖರ, ಹರೀಣಾಕ್ಷಿ‌ ಬೇಲ್ಯ, ನವ್ಯಾ ಚಂದ್ರಶೇಖರ, ಶಿವರಾಮ ಕೇರ್ಪಳ, ಕೇಶವ ಮಾಸ್ತರ್ ಹೊಸಗದ್ದೆ ಭಾಗವಹಿಸಿದ್ದರು.