ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಮಾರ್ಚ್ 19 ಮತ್ತು 20ರಂದು ನಡೆಯಲಿದೆ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ದುಗ್ಗಲಾಯ, ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಮಾರ್ಚ್ 19 ಮತ್ತು 20ರಂದು ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರವನ್ನು ಇಂದು ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.


ದೈವಸ್ಥಾನದ ಮುಂಭಾಗದಲ್ಲಿ ಆನುವಂಶಿಕ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆಯವರು ಜಾತ್ರೋತ್ಸವವು ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥಿಸಿದರು. ಬಳಿಕ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಂದರ ರಾವ್, ಗೌರವಾಧ್ಯಕ್ಷರಾದ ದಯಾನಂದ ಸಾಲಿಯಾನ್, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ನಗರ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ, ಶ್ರೀಮತಿ ಶಶಿಕಲಾ ನೀರಬಿದಿರೆ, ಪ್ರಮುಖರಾದ ದಿನೇಶ್ ಡಿ.ಕೆ., ಜಯರಾಮ ಪಾನತ್ತಿಲ,ಯತೀಶ್ ರೈ ದುಗ್ಗಲಡ್ಕ, ಗಿರಿಧರ ಗೌಡ ನೆಕ್ರಾಜೆ, ಶ್ರೀಮತಿ ಪ್ರಭಾವತಿ ರೈ, ನಾರಾಯಣ ಟೈಲರ್, ಶ್ರೀಮತಿ ಶೀಲಾವತಿ ಮಾಧವ, ಶಿವರಾಮ ಪಾನತ್ತಿಲ, ಶ್ರೀಮತಿ ಶೈಲಜಾ ನೀರಬಿದಿರೆ,ಶ್ರೀಮತಿ ಕಲಾವತಿ ದುಗ್ಗಲಡ್ಕ, ಶೇಖರ ಕುದ್ಪಾಜೆ, ನಾರಾಯಣ ನಾಯ್ಕ್, ಶಿವಪ್ರಸಾದ್ ಕುದ್ಪಾಜೆ, ನಾರಾಯಣ ಕಲಾಪ್ರಿಯ, ಕೃಷ್ಣಪ್ಪ ಗೌಡ ಕೊಡೆಂಚಡ್ಕ, ಮೋಹನ ಕೊಯಿಕುಳಿ, ದೇವರಾಜ್ ನೀರಬಿದಿರೆ, ಚನಿಯ ದುಗ್ಗಲಡ್ಕ, ಸಂದೀಪ್ ದುಗ್ಗಲಡ್ಕ, ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು.