ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ

0

ಕೆ.ವಿ.ಜಿ ಕಾನೂನು ಕಾಲೇಜು ಮಹಾವಿದ್ಯಾಲಯದಲ್ಲಿ ದಿ.15.2.2024 ರಂದು ವಾರ್ಷಿಕ ಕ್ರೀಡೋತ್ಸವ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆಹರು ಸ್ಮಾರಕ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ರಾಧಾಕೃಷ್ಣ ಮಾಣಿಬೆಟ್ಟು ರವರು ನೆರವೇರಿಸಿದರು ಹಾಗೂ ಅವರು ಮಾತನಾಡುತ್ತಾ ಸದೃಢ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ವ್ಯಾಯಾಮ ಹಾಗೂ ಯೋಗಾಸನಗಳು ಅತೀ ಅವಶ್ಯಕ ಎಂದರು.


ಈ ಸಮಾರಂಭದ ಅಧ್ಯಕ್ಷತೆಯನ್ನು ಎ.ಒ.ಎಲ್.ಎ ಇದರ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದರು ವಹಿಸಿ , ಆರೋಗ್ಯಕರ ಜೀವನಕ್ಕೆ ಪ್ರತಿದಿನ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು. ಅಲ್ಲದೇ ಈ ಸಂದರ್ಭದಲ್ಲಿ ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ನಾಲ್ಕು ತಂಡಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.


ಕಾಲೇಜಿನ ಕ್ರೀಡಾ ಸಂಯೋಜಕ ಲಕ್ಷ್ಮಿಕಾಂತ್ ಕೆ.ಎಲ್ ಸ್ವಾಗತಿಸಿ , ಪ್ರಾಂಶುಪಾಲರಾದ ಉದಯ ಕೃಷ್ಣ. ಬಿ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರುತಿ ರಾಧಾಕೃಷ್ಣನ್ , ಚಂದನಾ .ಪಿ.ಎಸ್, ರಮ್ಯ ಕೆ .ಎಂ ಪ್ರಾರ್ಥಿಸಿ, ವೃಂದ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.