ದುಗ್ಗಲಡ್ಕ- ನೀರಬಿದಿರೆ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

0

ದುಗ್ಗಲಡ್ಕ- ಕೊಡಿಯಾಲಬೈಲ್-ಸುಳ್ಯ ರಸ್ತೆಯ ನೀರಬಿದಿರೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಇಂದು ಉದ್ಘಾಟನೆ ನಡೆಯಿತು.

ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆಗೆ ಮಾಜಿ ಸಚಿವರಾದ ಎಸ್.ಅಂಗಾರರವರು ರೂ.25 ಲಕ್ಷ ಅನುದಾನ ಒದಗಿಸಿ, 346 ಮೀಟರ್ ಉದ್ದ ಕಾಂಕ್ರೀಟ್ ಕಾಮಗಾರಿ ನಡೆದಿತ್ತು.ರಸ್ತೆಯನ್ನು ಮಾಜಿ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನೆರವೇರಿಸಿದರು.

ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ ಮತ್ತು ಶ್ರೀಮತಿ ಶಶಿಕಲಾ ನೀರಬಿದಿರೆ, ಉಬರಡ್ಕ ಮಿತ್ತೂರು ಗ್ರಾ.ಪಂ.ಸದಸ್ಯ ಹರೀಶ್ ರೈ ಉಬರಡ್ಕ, ಮಾಜಿ ನ.ಪಂ.ಸದಸ್ಯ ರುಗಳಾದ ಇಬ್ರಾಹಿಂ ನೀರಬಿದಿರೆ, ಗೋಪಾಲ ಮಣಿಯಾಣಿ ಈಶ್ವರಡ್ಕ, ದಿನೇಶ್ ಡಿ.ಕೆ.ದುಗ್ಗಲಡ್ಕ, ಹಸೈನಾರ್ ಕೊಳಂಜಿಕೋಡಿ, ಪರಮೇಶ್ವರ ನಾಯ್ಕ , ಹುಸೈನಾರ್ ಕೊಳಂಜಿಕೋಡಿ, ಶಿವಕುಮಾರ್ ಈಶ್ವರಡ್ಕ, ರೂಪೇಶ್ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು.