ಬೈತಡ್ಕ ಸಮೀಪ ಮಾಣಿ ಮೈಸೂರು ಹೆದ್ದಾರಿಯಲ್ಲಿ ಚೆಲ್ಲಿದ ಆಯಿಲ್

0

ಸುಳ್ಯ ಪೊಲೀಸರು ಮತ್ತು ಸ್ಥಳೀಯರಿಂದ ಸ್ವಚ್ಛತೆ

ಜಾಲ್ಸೂರು ಗ್ರಾಮದ ಬೈತಡ್ಕ ಮಾಣಿ ಮೈಸೂರು ಹೆದ್ದಾರಿಯ ರಸ್ತೆಯಲ್ಲಿ ಚಲಿಸಿದ ವಾಹನ ಒಂದರಿಂದ ಇಂಜಿನ್ ಆಯಿಲ್ ಚೆಲ್ಲಿ ಅಲ್ಪ ಸಂಮಯ ವಾಹನ ಸವಾರರಿಗೆ ಆತಂಕ ಎದುರಾಗಿತ್ತು.

ಇದೇ ಸಂದರ್ಭ ಈ ರಸ್ತೆಯಲ್ಲಿ ಬಂದ ಎರಡು ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯಗೊಂಡ ಘಟನೆಯೂ ನಡೆಯಿತು.ಇದನ್ನು ಅರಿತ ಸ್ಥಳಿಯರು ಕೂಡಲೇ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದಿಂದ ಇಂಜಿನ್ ಆಯಿಲ್ ಬಿದ್ದ ಸ್ಥಳಕ್ಕೆ ಮಣ್ಣು ಹಾಕುವುದರ ಮೂಲಕ ಸ್ವಚ್ಛಪಡಿಸುವ ಕಾರ್ಯವನ್ನು ಮಾಡಿದರು. ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಅಬ್ದುಲ್ ಗಫ್ಫಾರ್, ಇಬ್ರಾಹಿಂ ಕಲ್ಲುಮುಟ್ಲು ಶಾಫಿ ಅಡ್ಕಾರ್, ಪೂರ್ಣಚಂದ್ರ,ಸುಳ್ಯ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಉದಯ ಭಟ್ ಹಾಗೂ ಹರೀಶ್ ಭಾಗವಹಿಸಿದ್ದರು.