ಉಬರಡ್ಕ : ಯುವತಿ ಮಂಡಲ ಪುನರ್ ರಚನೆ

0

ಅಧ್ಯಕ್ಷರಾಗಿ ಚಂಪಾ ಕಿರಣ್. ಪ್ರದಾನಕಾರ್ಯದರ್ಶಿ ಪ್ರಿಯಾ ಮಂಚದಕಲ್ಲು, ಕೋಶಾಧಿಕಾರಿ ವನಿತಾ ಮೀನಗದ್ದೆ ಆಯ್ಕೆ

ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನಿಷ್ಕ್ರಿಯಗೊಂಡ ಯುವತಿ ಮಂಡಲವನ್ನು ಪುನರಚನೆ ಮಾಡಲಾಯಿತು. ನೂತನ ಸಮಿತಿ ಹಾಗೂ ಪದಗ್ರಹಣ ಸಮಾರಂಭವು ಉಪಾಧ್ಯಕ್ಷರಾದ ಹವ್ಯ ಬೈತಡ್ಕ ರವರ ಮನೆಯಲ್ಲಿ ಜರುಗಿತು.


ನೂತನ ಅಧ್ಯಕ್ಷರಾಗಿ ಚಂಪಾಕಿರಣ್ ಯಾವಟೆ, ಪ್ರದಾನಕಾರ್ಯದರ್ಶಿಯಾಗಿ ಪ್ರಿಯಾ ಮಂಚದಕಲ್ಲು, ಕೋಶಾಧಿಕಾರಿಯಾಗಿ ವನಿತಾ ಮೀನಗದ್ದೆ, ಉಪಾಧ್ಯಕ್ಷರಾಗಿ ಹವ್ಯ ಬೈತಡ್ಕ, ಜತೆ ಕಾರ್ಯದರ್ಶಿ ಆಶಿಕಾ ಯಾವಟೆ, ಕ್ರೀಡಾಕಾರ್ಯದರ್ಶಿಯಾಗಿ ಭವಾನಿ ಮೂರ್ಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಮಿತ್ರ ಬೆಳ್ಳಿಪ್ಪಾಡಿಯವರು ಆಯ್ಕೆ ಯಾದರು.


ನಿರ್ದೇಶಕರುಗಳಾಗಿ ಲಲಿತ ಬೈತಡ್ಕ, ಸುಶೀಲ ಮೂರ್ಜೆ, ಪಾವನ ಯಾವಟೆ, ಮಾನಸ ಬೈತಡ್ಕ, ಭಾರತಿ ಮಂಚದಕಲ್ಲು,
ಕವಿತ ಬೈತಡ್ಕ, ಶೃತಿ ಯಾವಟೆ, ಲೀಲಾವತಿ ಪಟ್ಟೆ, ಪ್ರಶಾಂತಿ ಮಂಚದಕಲ್ಲು ಆಯ್ಕೆಯಾದರು.
ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ರವರು ಪದಗ್ರಹಣ ನಡೆಸಿಕೊಟ್ಟು ಪ್ರಮಾಣವಚನ ಬೋಧಿಸಿದರು. ಅತಿಥಿಗಳಾಗಿ ಕುತ್ತಮೊಟ್ಟೆ
ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ರವರು ಭಾಗವಹಿಸಿದ್ದರು. ನಿರ್ದೇಶಕರಾದ ಮಾನಸ ಬೈತಡ್ಕ ಸ್ವಾಗತಿಸಿ, ಪ್ರಧಾನಕಾರ್ಯದರ್ಶಿ ಪ್ರಿಯಾ ಮಂಚದಕಲ್ಲು ವಂದಿಸಿದರು.