ಬಿ.ಸೋಮನಾಥ ಕೊಡೆಂಚಿಂಕಾರ್ ರಿಗೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿಯಾಗಿ ಪದೋನ್ನತಿ

0

ಸುಳ್ಯ ಅಗ್ನಿಶಾಮಕ ಇಲಾಖೆಯಲ್ಲಿ ಸೀನಿಯರ್ ಚಾಲಕರಾಗಿದ್ದ ಬಿ.ಸೋಮನಾಥ ಕೊಡೆಂಚಿಕಾರ್ ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯಾಗಿದೆ.

1994ರಲ್ಲಿ‌ ಅಗ್ನಿಶಾಮಕ ಇಲಾಖೆಯಲ್ಲಿ ಚಾಲಕರಾಗಿ ಸೇವೆಗೆ ಸೇರಿದ ಇವರು ಕಾರ್ಕಳದಲ್ಲಿ ಸೇವೆ ಆರಂಭಿಸಿದರು. 2002 ನೇ ಇಸವಿಯಲ್ಲಿ ಅವರು ಪುತ್ತೂರು ಅಗ್ನಿಶಾಮಕ ಇಲಾಖೆಗೆ ಬಂದರು. ಅಲ್ಲಿಂದ 2009ರಲ್ಲಿ ಅವರು ಸುಳ್ಯಕ್ಕೆ ಬಂದರು. ಇದೀಗ ಅವರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಗೊಂಡಿದ್ದಾರೆ. ಅವರು ಸುಳ್ಯದಲ್ಲಿ ಪ್ರಭಾರ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ನಿವಾಸಿಯಾಗಿರುವ ಇವರ ಪತ್ನಿ ಶ್ರೀಮತಿ ಸಾವಿತ್ರಿ ಗೃಹಿಣಿಯಾಗಿದ್ದಾರೆ. ಪುತ್ರಿ ಕು.ಶ್ರದ್ಧಾ ಮಂಗಳೂರಿನಲ್ಲಿ ವೈದ್ಯರಾಗಿದ್ದಾರೆ. ಇನ್ನೋರ್ವ ಪುತ್ರಿ ಸುಳ್ಯ ಎನ್ನೆಂಪಿಯುಸಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.