ಅರಂತೋಡು: ಚಾಂಬಾಡು ಸೇತುವೆಯಲ್ಲಿ ಬಿರುಕು ಹಿನ್ನೆಲೆ ಘನ ವಾಹನಗಳ ಸಂಚಾರ ನಿಷೇಧಿಸಿರುವ ಗ್ರಾ.ಪಂ.

0

ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿರುವ ಚಾಂಬಾಡು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಶಿಥಿಲಾವಸ್ಥೆ ತಲುಪಿದ್ದು, ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಬ್ಯಾನರ್ ಅಳವಡಿಕೆ ಮಾಡಿದ್ದರೂ, ರಾತ್ರಿಯ ವೇಳೆ ಘನ ವಾಹನ ಸಂಚರಿಸುತ್ತಿದ್ದು, ಇದೀಗ ಜಲ್ಲಿ ಸಾಗಿಸುತ್ತಿದ್ದ ಹತ್ತು ಚಕ್ರದ ಲಾರಿಯನ್ನು ಸ್ಥಳೀಯರು ತಡೆದು ನಿಲ್ಲಿಸಿ, ಬಂದ ರಸ್ತೆಯಲ್ಲಿಯೇ ಹಿಂತಿರುಗಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಸೇತುವೆಯು ಶಿಥಿಲಗೊಂಡಿದ್ದು, ಸೇತುವೆಯ ಅಡಿಭಾಗದಲ್ಲಿ ಕಬ್ಬಿಣದ ರಾಡುಗಳು ಮುರಿದಿದ್ದು, ಸೇತುವೆ ಬಿರುಕು ಕಂಡಿದ್ದು, ಇತ್ತೀಚೆಗೆ ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಘನವಾಹನ ಸಂಚಾರ ನಿಷೇಧಿಸಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಆದರೂ ರಾತ್ರಿಯ ವೇಳೆ ಘನವಾಹನದ ಮೂಲಕ ಜಲ್ಲಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.