ಪೈಚಾರಿನಲ್ಲಿ ಮೋದಿಕೇರ್ ಡಿಸ್ಟ್ರಿಬ್ಯೂಷನ್ ಪಾಯಿಂಟ್ ಶುಭಾರಂಭ

0

ಸುಳ್ಯದ ಪೈಚಾರಿನಲ್ಲಿ ಮಾ.೬ರಂದು ಮೋದಿಕೇರ್ ಡಿಸ್ಟ್ರಿಬ್ಯೂಷನ್ ಪಾಯಿಂಟ್ ಶುಭಾರಂಭಗೊoಡಿತು.ದುಗ್ಗಲಡ್ಕದ ಕಾರ್ತಿಕ್ ಟಿ. ಕೂಟೇಲುರವರ ಮಾಲಕತ್ವದ ಈ ಸ್ವದೇಶಿ ಉತ್ಪನ್ನಗಳ ವಿತರಣಾ ಕೇಂದ್ರದ ಉದ್ಘಾಟನೆಯನ್ನು ಮೋದಿಕೇರ್ ಭಾರತದ ರಾಕಿಂಗ್ ಚಾಂಪಿಯನ್ ತಂಡದ ನಾಯಕ ಗ್ಲೋಬಲ್ ರೆಡ್ ಡೈಮಂಡ್ ಡೈರೆಕ್ಚರ್, ೧ಕೋಟಿ ಆಝಾದಿ ಕ್ಲಬ್ ಮೆಂಬರ್, ಎಸ್‌ಎಂಎಸಿ ಮೆಂಬರ್, ಬಿಎಂಡಬ್ಲೂö್ಯ ಕಾರ್ ಅಚೀವರ್ ರವೀಂದ್ರ ಶ್ರಿಯಾನ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮೋದಿಕೇರ್ ಕರಾವಳಿಯ ಮೊದಲ ಲಕ್ಷಾಧೀಶ್ವರಿಯಾದ ಬ್ಲಾಕ್ ಡೈಮಂಡ್ ಡೈರೆಕ್ಟರ್ ಶ್ರೀಮತಿ ನೀತಾ ಕೆ ನಾಯಕ್, ಮಂಗಳೂರಿನ ಮೊದಲ ಲಕ್ಷಾಧೀಶ್ವರಿಯಾದ ಬ್ಲಾಕ್ ಡೈಮಂಡ್ ಡೈರೆಕ್ಟರ್ ಶ್ರೀಮತಿ ಮಮತಾ ರಾಜೇಶ್ ಹಾಗೂ ಸೀನಿಯರ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಶ್ರೀಮತಿ ಜಯಂತಿ ಪುಷ್ಪರಾಜ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೋದಿಕೇರ್ ಬ್ಯುಸಿನೆಸ್ ಕುರಿತಾಗಿ ಮಾಹಿತಿಯನ್ನು ಬ್ಲಾಕ್ ಡೈಮಂಡ್ ಡೈರೆಕ್ಟರ್ ರಾಜೇಶ್ ಅವರು ತಿಳಿಯಪಡಿಸಿದರು. ಮೋದಿಕೇರ್ ಉತ್ಪನ್ನಗಳ ಗುಣಮಟ್ಟವನ್ನು ಪ್ರಾತ್ಯಕ್ಷಿಕವಾಗಿ ಶ್ರೀಮತಿ ಜಯಂತಿ ಪುಷ್ಪರಾಜ್ ತಿಳಿಸಿಕೊಟ್ಟರು.ಕಾರ್ಯಕ್ರಮದ ಉದ್ಘಾಟಕರಾದ ರವೀಂದ್ರ ಶ್ರಿಯಾನ್ ಅವರು ಯಾಕೆ ಮೋದಿಕೇರ್ ಬ್ಯುಸಿನೆಸ್ ಮಾಡಬೇಕು, ಯಾವುದೇ ಭಂಡವಾಳವಿಲ್ಲದೇ ಪ್ರತಿಯೊಬ್ಬರೂ, ಜಾತಿ ಧರ್ಮ, ಬಡವ ಶ್ರೀಮಂತ ಅನ್ನದೇ ಮಾಡಬಹುದಾದ ಈ ಬ್ಯುಸಿನೆಸ್ ಹೇಗೆ ಜೀವನ ಶೈಲಿಯನ್ನ ಬದಲಾಯಿಸುತ್ತದೆ ಹಾಗೂ ಒಂದು ಸ್ವದೇಶಿ ಉತ್ಪನ್ನದ ಬಳಕೆಯಿಂದ ಪ್ರತಿಯೊಬ್ಬ ವ್ಯಕ್ತಿಯೂ ಆಧಾಯವನ್ನು ಹೇಗೆ ಪಡೆಯಬಹುದು ಅನ್ನುವುದರ ಕುರಿತಾಗಿ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಸುಳ್ಯ ಭಾಗದ ಮೋದಿಕೇರ್ ಭಾರತದ ಲೀಡರುಗಳಾದ ಶ್ರೀಮತಿ ಮಣಿಮೇಘಲೆ, ಸತ್ಯಭಾಮ, ರಾಜಕುಮಾರ್, ಶಿವಕುಮಾರ್, ಶ್ರೀಮತಿ ರೀಟಾ, ಶ್ರೀಮತಿ ಪ್ರೇಮಲತಾ ಹಾಗೂ ಶ್ರೀಮತಿ ಕಮಲಾ ಮುಂತಾದವರು ಉಪಸ್ಥಿತರಿದ್ದರು.