ನಿತ್ಯ ಫುಡ್ ಪ್ರಾಡಕ್ಟ್ ಮಾಲಕ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಎಕ್ಸಲೆನ್ಸ್ ಎಂಟರ್ಪ್ರೊನ್ಯೂರ್ ಅವಾರ್ಡ್ 2024

0

ಮೂಲತಃ ಅಮರಪಡ್ನೂರು ಗ್ರಾಮದವರಾಗಿ ಪ್ರಸ್ತುತ ಪುತ್ತೂರಿನಲ್ಲಿ ನಿತ್ಯ ಪ್ರಾಡಕ್ಟ್ ಎಂಬ ಹೆಸರಿನಡಿ ವಿವಿಧ ಉತ್ಪನ್ನಗಳು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ನಡೆಸಿದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಎಕ್ಸಲೆನ್ಸ್ ಎಂಟರ್ಪ್ರೊನ್ಯೂರ್ ಅವಾರ್ಡ್ 2024 ಪ್ರಶಸ್ತಿ ನೀಡಿ ಗೌರವಿಸಿದೆ.

2015ರಲ್ಲಿ ಪುತ್ತೂರಿನ ಮುಕ್ವೆಯಲ್ಲಿ ನಿತ್ಯ ಫುಡ್ ಪ್ರಾಡಕ್ಟ್ ಎಂಬ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಿ ಹಂತ ಹಂತವಾಗಿ ಯಶಸ್ಸನ್ನು ಕಂಡಿರುವ ರಾಧಾಕೃಷ್ಣ ಇಟ್ಟಿಗುಂಡಿಯವರು ಕಳೆದ 5 ವರ್ಷಗಳಿಂದ ಹಲಸಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ. ಹಲಸಿನ ಹಣ್ಣು ಮತ್ತು ಬೀಜದಿಂದ ಪೌಡರ್, ಕುಕ್ಕೀಸ್, ಚಪಾತಿ ಇನ್ನಿತರ ಉತ್ಪನ್ನಗಳನ್ನು ತಯಾರಿಸಿ ದ.ಕ‌. ಜಿಲ್ಲೆ, ಉಡುಪಿ ಸೇರಿದಂತೆ ದೇಶದಾದ್ಯಂತ ಮಾರುಕಟ್ಟೆಯನ್ನು ಹೊಂದಿದ್ದಾರೆ. ಆಹಾರ ಉತ್ಪನ್ನಗಳ ಮೂಲಕ ಹಲಸಿನ ಹಣ್ಣಿಗೆ ಮೌಲ್ಯ ವರ್ಧನೆಯನ್ನು ಮಾಡಿರುವ ನೆಲೆಯಲ್ಲಿ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇವರ ಈ ಸಾಧನೆಗಾಗಿ ಈ ಹಿಂದೆಯೂ ವಿವಿಧ ಸಂಘ ಸಂಸ್ಥೆಗಳಿಂದ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ.