ನಾಳೆ ಬೆಳಿಗ್ಗೆ ಅಡ್ಕಾರು ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ – ಗುಳಿಗ ದೈವಸ್ಥಾನಕ್ಕೆ ಹಸಿರುವಾಣಿ ಸಮರ್ಪಣೆ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಹಾಗೂ ಗುಳಿಗರಾಜ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಮಾ.21ರಿಂದ 23ರವರೆಗೆ ಜರುಗಲಿದ್ದು, ಹಸಿರುವಾಣಿ ಸಮರ್ಪಣಾ ಮೆರವಣಿಗೆಯು ಮಾ.21ರಂದು ನಾಳೆ ಬೆಳಿಗ್ಗೆ 10.00 ಗಂಟೆಗೆ ಅಡ್ಕಾರಿನ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನದಿಂದ ಮತ್ತು ಅಡ್ಕಾರಿನ ಅಂಜನಾದ್ರಿ ಬಳಿಯಿಂದ ಹಸಿರುವಾಣಿ ಕಾರ್ಯಕ್ರಮವು ಜರುಗಲಿದೆ.

ಭಕ್ತಾದಿಗಳು ಸಮರ್ಪಿಸುವ ಹಸಿರುವಾಣಿಯನ್ನು ಪೂರ್ವಾಹ್ನ 9.30ಕ್ಕೆ ಅಡ್ಕಾರಿನ ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ, ಮತ್ತು ಶ್ರೀಕ್ಷೇತ್ರ ಅಂಜನಾದ್ರಿಯ ಜಯಂತ ಗೌಡರ ಮನೆ ಬಳಿಗೆ ತಲುಪಿಸುವಂತೆ ಸಮಿತಿಯ ವತಿಯಿಂದ ತಿಳಿಸಲಾಗಿದೆ.