ಕೆ.ವಿ.ಜಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ

0

ಶೈಕ್ಷಣಿಕ ವರ್ಷ ೨೦೨೩-೨೪ ನೇ ಸಾಲಿನ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಕಾಲೇಜಿನ ಸಿ.ಇ.ಒ. ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಮಹಾಬಲೇಶ್ವರ ಸಿ.ಹೆಚ್, ಆಡಳಿತಾಧಿಕಾರಿ ಶ್ರೀ ಮಾಧವ ಬಿ.ಟಿ. ಮತ್ತು ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಜೊತೆಗೆ ಸ್ನಾತ್ತಕೋತ್ತರ ನಿರ್ದೇಶಕರಾದ ಡಾ. ಶರತ್ ಕುಮಾರ್ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಿದ್ದರು.


ವಿದ್ಯಾರ್ಥಿ ಮಂಡಳಿಯ ಅಧ್ಯಕ್ಷರಾಗಿ ರಿಷಿಕೇಶ್ ಆರ್., ಸುವರ್ಣ, ಉಪಾಧ್ಯಕ್ಷ ನಫೀಸತುಲ್ ಮಿಸ್ರಿಯಾ, ಕಾರ್ಯದರ್ಶಿ ಅನ್ನ ಜೆಕೋಬ್, ಖಜಾಂಜಿ ಶಶಾಂಕ್, ಕ್ರೀಡಾ ಕಾರ್ಯದರ್ಶಿ ಅಭಯ್ ಎಸ್ ಜಾನ್ಸ್, ಸಾಂಸ್ಕ್ರತಿಕ ಕಾರ್ಯದರ್ಶಿಗಳಾದ ಅಧಿನಾ ಜಬಿನ್ ಮತ್ತು ಎ. ಆಯಿಷತ್ ಸಬೀಹಾ, ಯೋಗ ಸಂಯೋಜಕರಾದ ಸಮೃದ್ದಿ ಎಸ್.ಕೆ. ಮತ್ತು ಪಲ್ಲವಿ ಪೂಜಾರ್, ವೆಬ್ ಮತ್ತು ನೆಟ್‌ವರ್ಕಿಂಗ್ ಸಂಯೋಜಕರಾದ ಸಹಲ್ ಮೊಕಮ್ಮದ್ ಕೆ ಮತ್ತು ಹಲೀಮಾ ನಿಷ್ಮಾ ಜೊತೆಗೆ ತರಗತಿ ಪ್ರತಿನಿಧಿಗಳಾದ ಉಜ್ವಲ್ ವಿ ಸುವರ್ಣ ಮತ್ತು ಮಹಮ್ಮದ್ ಶಾದಿಲ್ ಪ್ರಥಮ ಬಿ.ಡಿ.ಎಸ್, ಶಿವಾನಿ ಡಿ. ಆರ್ ಮತ್ತು ಶ್ರೀ ಅಮಲ್ ಎಸ್ ನಾಯರ್ ದ್ವಿತೀಯ ಬಿಡಿಎಸ್, ಪ್ರೀತಾ ಟಿ ಮತ್ತು ಅಶ್ವತ್ ಎ. ಎಂ ತೃತೀಯ ಬಿಡಿಎಸ್, ಸುದಿನ ಕಾಮತ್ ಕೆ. ಮತ್ತು ಪ್ರಿಯಾಂಕ ಅಚಿತಿಮ ಬಿಡಿಎಸ್, ಜೊತೆಗೆ ಇಂಟರ್ನ್ಸ್ ಪ್ರತಿನಿಧಿಗಳಾದ ಆದರ್ಶ ಎ.ಪಿ. ಫಾತಿಮಾ ಶಿದಾ, ಸ್ನಾತಕೋತ್ತರ ಪ್ರತಿನಿಧಿಗಳಾದ ಡಾ. ಮನಿಶಾ ರೈ ಮತ್ತು ಡಾ. ಪ್ರಜ್ವಲ್ ಪೊದುವಾಳ್ ಯು.ಪಿ. ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಎಲ್ಲರೂ ಪ್ರಮಾಣೀಕವಾಗಿ ಮತ್ತು ಶ್ರದ್ಧೆಯಿಂದ ಒಕ್ಕೂಟವನ್ನು ಮುನ್ನಡಿಸುವಂತೆ ಪ್ರತಿಜ್ಞೆ ಮಾಡಿದರು. ಪ್ರಾಂಶುಪಾಲರು ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು ಮತ್ತು ಎಲ್ಲರೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಕೆಲಸ ಮಾಡುವಂತೆ ಕರೆ ನೀಡಿದರು.


ಕೆ.ವಿ.ಜಿ ದಂತ ಮಹಾ ವಿದ್ಯಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ತಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಬದ್ಧತೆಯನ್ನು ಉತ್ತಮಗೊಳಿಸಿ ಕಾರ್ಯನಿರ್ವಹಿಸಲು ಸೂಚನೆಯನ್ನು ಇತ್ತರು.
೨೦೨೩-೨೪ ನೇ ಶೈಕ್ಷಣಿಕ ವರ್ಷದ ಪದಾಧಿಕಾರಿಗಳಿಗೆ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಡಾ. ಮಹಾಬಲೇಶ್ವರ ಸಿ. ಹೆಚ್. ಪ್ರಮಾಣವಚನ ಭೋದಿಸಿದರು. ಡಾ. ಆಕಾಂಕ್ಷ ಮತ್ತು ಡಾ. ಸ್ವಾತಿ ಕಾರ್ಯಕ್ರಮವನ್ನು ನಿರ್ವಹಿಸಿದರು.