ಕಳಂಜ:ತಂಟೆಪ್ಪಾಡಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಟ್ಟ ಸ್ಥಳೀಯರು

0

ರಸ್ತೆ ಅಗಲೀಕರಿಸಿಕೊಟ್ಟ ವಸಂತ ಶೆಟ್ಟಿ

ಕಳಂಜ ಗ್ರಾಮದ ಕಜೆಮೂಲೆ ತಂಟೆಪ್ಪಾಡಿ ರಸ್ತೆಯ ಅಗಲೀಕರಣಕ್ಕೆ ಸ್ಥಳೀಯರು ಜಾಗ ಬಿಟ್ಟು ಕೊಟ್ಟರೆ, ರಸ್ತೆ ಅಗಲೀಕರಣ ಕೆಲಸವನ್ನು ತನ್ನ ಸ್ವಂತ ಖರ್ಚಿನಿಂದ ವಸಂತ ಶೆಟ್ಟಿ ಮಾಡಿ ಕೊಟ್ಟಿದ್ದಾರೆ.

ಈ ರಸ್ತೆಯ ಎರಡ್ಮೂರು ಕಡೆ ರಸ್ತೆ ತೀರಾ ಇಕ್ಕಟ್ಟಾಗಿದ್ದು ಈ ಸಂಬಂಧ ನಿನಾದ ಸಾಂಸ್ಕೃತಿಕ ಕೇಂದ್ರದ ವಸಂತ ಶೆಟ್ಟಿ ಅವರು ಸ್ಥಳೀಯರಾದ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಕೃಷ್ಣ ಪ್ರಸಾದ್ ಕಾಂಚೋಡು, ಕೇಶವ ಗೌಡ ತಂಟೆಪ್ಪಾಡಿ, ರಾಣಿ ಪದ್ಮನಾಭನ್ ಮತ್ತಿರೊಂದಿಗೆ ಮಾತನಾಡಿದ್ದು ರಸ್ತೆ ಅಗಲೀಕರಣಕ್ಕೆ ಸ್ಥಳ ನೀಡುವಂತೆ ಕೇಳಿಕೊಂಡರಲ್ಲದೆ ತಾನೆ ಮುಂದೆ ನಿಂತು ಜೆ.ಸಿ.ಬಿ ಬಳಸಿ ರಸ್ತೆ ಅಗಲೀಕರಣ ಮಾಡಿಕೊಟು ಶಾಶ್ವತ ವ್ಯವಸ್ಥೆ ಗೆ ಮುನ್ನುಡಿ ಬರೆದರು.