ಹರಿಪ್ರಸಾದ್ ನಾಯಕ್ ಮುಳ್ಯರಿಗೆ ಸನ್ಮಾನ

0

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಮಾ. 24 ರಂದು ನಡೆದ ಸಾರಸ್ವತ ಕಪ್-2024 ಸ್ವ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಹರಿಪ್ರಸಾದ್ ನಾಯಕ್ ಮುಳ್ಯರವರನ್ನು ಸನ್ಮಾನಿಸಲಾಯಿತು.

ಇವರು ಬ್ಯಾಡ್ಮಿಟನ್, ಕಬ್ಬಡ್ಡಿ, ಕ್ರಿಕೆಟ್ ಆಟಗಾರರಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ರಾಜೇಶ್ ಪ್ರಭು, ದಿನೇಶ್ ಕುಂಭಕೋಡು,ಸುರೇಂದ್ರ ಕಾಮತ್ ಹಾಗೂ ಪ್ರವೀಣ್ ಇವರನ್ನು ಸನ್ಮಾನಿಸಲಾಯಿತು.