ಐವತ್ತೊಕ್ಲು : ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೇಲ್ಪಾಡಿ ನಿಧನ

0

ಪಂಜದ ಬಿಜೆಪಿ ಪಕ್ಷದ ಕಾರ್ಯಕರ್ತ,
ಐವತ್ತೊಕ್ಲು ಗ್ರಾಮದ ಮೇಲ್ಪಾಡಿ ದಿ.ಮಾಯಿಲಪ್ಪ ಗೌಡರ ಪುತ್ರ ಚಂದ್ರಶೇಖರ ಮೇಲ್ಪಾಡಿಯವರು ಮಾ.31 ರಂದು
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬೂತ್ ಅಧ್ಯಕ್ಷನಾಗಿ, ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರಿಗೆ ಸುಮಾರು 35 ವರುಷ ವಯಸ್ಸಾಗಿತ್ತು. ಮುಂಜಾನೆ ಒಮ್ಮಿಂದೊಮ್ಮೆಲೆ ಅನಾರೋಗ್ಯ ಕಾಣಿಸಿಕೊಂಡಿತು. ತಕ್ಷಣ ಅವರನ್ನು ಕಾಣಿಯೂರು ಆಸ್ಪತ್ರೆ‌ ಸೇರಿಸಲಾಯಿತು. ಅಲ್ಲಿ ವೈದ್ಯರ ಸಲಹೆ ಮೇರೆಗೆ ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದುರು. ಆದರೆ ಅಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ . ಮೃತರು ತಾಯಿ ಶ್ರೀಮತಿ ದೇವಕಿ,ಪತ್ನಿ ಶ್ರೀಮತಿ ಭವ್ಯ, ಸಹೋದರ ವಸಂತ, ಸಹೋದರಿ ಶೋಭಾವತಿ, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.