ಉಬರಡ್ಕ: ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

0

ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಇದರ ವತಿಯಿಂದ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವು ಮಾ.31 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ವೇದತ್ರಯ ಭಜನಾ ತಂಡ ಉಬರಡ್ಕ ಮತ್ತು ಶ್ರೀ ರಕ್ತೇಶ್ವರಿ ಮಹಿಳಾ ಭಜನಾ ಮಂಡಳಿ ಸೂರ್ತಿಲ ಕಾಯರ್ತೋಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸವಿತಾ ಸಂದೇಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯರಾದ ಶ್ರೀಮತಿ ಶಂಕರಿ ಸೀತಾರಾಮ ಭಟ್ ಉಬರಡ್ಕ, ನೆಹರೂ ಮೆಮೊರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಡಾ.ಅನುರಾಧ ಕುರುಂಜಿ, ಬ್ರಹ್ಮಕುಮಾರಿ ರಾಜ್ಯೋಗ ಶಿಕ್ಷಣ ಕೇಂದ್ರದ ಕೇಂದ್ರ ಉಸ್ತುವಾರಿ ಬಿ.ಕೆ.ಉಮಾದೇವಿ ಉಪಸ್ಥಿತರಿದ್ದರು.

ಬಿ.ಕೆ ಸುಜಯ ಮಂಗಳೂರು ಇವರು ಮಹಿಳೆ ಮತ್ತು ಸಂಸ್ಕಾರದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾದ ಶ್ರೀಮತಿ ಚಂದ್ರಾವತಿ ಬಳ್ಳಡ್ಕ ಇವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ರಾಜೇಶ್ವರಿ ಮಧುಸೂದನ್ ಹುಳಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಲಿತ ಸೂಂತೋಡು ಸ್ವಾಗತಿಸಿ, ಭಾಗ್ಯಶ್ರೀ ಬಳ್ಳಡ್ಕ ವಂದಿಸಿದರು.