ಫ್ರೆಂಡ್ಸ್ ಕ್ಲಬ್ ಕೇನ್ಯ – ಕ್ರಿಕೆಟ್ ಪಂದ್ಯಾಟ

0

ಫ್ರೆಂಡ್ಸ್ ಕ್ಲಬ್ ಕೇನ್ಯ ಇದರ ಆಶ್ರಯದಲ್ಲಿ ಆರು ತಂಡಗಳ 11ಜನರ ಲೀಗ್ ಮಾದರಿಯ ಫುಲ್ ಗ್ರೌಂಡ್ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ ಟ್ರೋಫಿ -2024 ಇತ್ತಿಚೆಗೆ ಕೇನ್ಯ ವಿಷ್ಣುನಗರದ ಮೈದಾನದಲ್ಲಿ ನಡೆಯಿತು.


ಸಭಾಧ್ಯಕ್ಷತೆ ಹಾಗೂ ಅಂಕಣ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ, ಕೇನ್ಯ ನೆರವೇರಿಸಿದರು. ಅತಿಥಿಗಳಾಗಿ ಕಡಬ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಗೌರವಾಧ್ಯಕ್ಷ ಅಶೋಕ್ ನೆಕ್ರಾಜೆ, ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪವನ್ ಪಲ್ಲತ್ತಡ್ಕ, ಕೇನ್ಯ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಉಪಸ್ಥಿತರಿದ್ದು, ಶುಭ ಹಾರೈಸಿದರು.


ಈ ಸುಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರವಿ ಕೊಠಾರಿ ಬೀದಿಗುಡ್ಡೆ ಇವರನ್ನು ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ ಅನಾರ್ಕಲಿ ತುಳು ಚಿತ್ರತಂಡದವರು ಆಗಮಿಸಿ ಪಂದ್ಯಾಕೂಟಕ್ಕೆ ಇನ್ನಷ್ಟು ಮೆರುಗು ನೀಡಿದರು.


ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಈಗಲ್ ಆಟೆಕರ್ಸ್ ನೇಲ್ಯಡ್ಕ , ದ್ವಿತೀಯ ಬಹುಮಾನವನ್ನು ಭಜರಂಗಿ ಕ್ರಿಕೆಟರ್ಸ್, ತೃತೀಯ ಬಹುಮಾನವನ್ನು ರೈಸಿಂಗ್ ಲಯನ್ಸ್ ಕೇನ್ಯ ಪಡೆದುಕೊಂಡರು. ಇವರಿಗೆ ಬಳ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ನಿರಂಜನಿ ಆರ್ ಶೆಟ್ಟಿ ಕೇನ್ಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು.