ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಭಕ್ತಾದಿಗಳಿಂದ ಶ್ರಮದಾನ

0

ಸುಳ್ಯಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಲ್ಲಿ ಕಾಲಾವಧಿ ಜಾತ್ರೋತ್ಸವವು ಎ.13ರಿಂದ ಪ್ರಾರಂಭಗೊಳ್ಳಲಿದ್ದು, ವಿವಿಧ ಸಂಘ -ಸಂಸ್ಥೆ ಹಾಗೂ ಭಕ್ತಾದಿಗಳಿಂದ ಶ್ರಮದಾನವು ಎ.7ರಂದು ನಡೆಯಿತು.

ಶ್ರಮದಾನಲ್ಲಿ ತೊಡಿಕಾನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಪದಾಧಿಕಾರಿಗಳು, ಉಳುವಾರು ಮಲ್ಲಡ್ಕ ಭಾಗದವರು ಹಾಗೂ ಅರಂತೋಡು ಗ್ರಾಮ ಪಂಚಾಯತಿ ಸದಸ್ಯ ರವೀಂದ್ರ ಪಂಜಿಕೋಡಿ ಮತ್ತು ತೊಡಿಕಾನದ ಯುವಕರು ಸೇರಿ ಜಳಕದ ಗುಂಡಿಯವರೆಗೆ ಶ್ರಮದಾನ ನಡೆಸಿದರು.