ಸುಳ್ಯದ ಹಿರಿಯ ಉದ್ಯಮಿ, ರಾಜೇಶ್ ಪೆಟ್ರೋಲ್ ಪಂಪ್ ಮಾಲಕ ಜಯರಾಮ ಆಳ್ವ ನಿಧನ

0


ಐವರ್ನಾಡು ಗ್ರಾಮದ ಕೃಷಿಕ, ರಾಜೇಶ್ ಬಾರ್ &ರೆಸ್ಟೋರೆಂಟ್ ಹಾಗೂ ರಾಜೇಶ್ ಪೆಟ್ರೋಲ್ ಪಂಪ್ ಮಾಲಕ ಹಿರಿಯ ಉದ್ಯಮಿ ಜಯರಾಮ ಆಳ್ವ ಅವರು ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ 10ರ ರಾತ್ರಿ ನಿಧನರಾದರು.

ಇವರಿಗೆ 83ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ವೇದಾವತಿ ಆಳ್ವ, ಪುತ್ರರಾದ ದೇವರಾಜ್ ಆಳ್ವ ಮತ್ತು ಗಣೇಶ್ ಆಳ್ವ, ಸೊಸೆಯಂದಿರು ಮಮತ ದೇವರಾಜ್ ಆಳ್ವ, ಸೀಮಾ ಗಣೇಶ್ ಆಳ್ವ , ಮೊಮ್ಮಕ್ಕಳಾದ ತ್ರಿಶಾ ಆಳ್ವ ಹಾಗೂ ರಿತಿ ಆಳ್ವ ಮತ್ತು ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.

ಇವರ ಅಂತ್ಯ ಕ್ರಿಯೆಯನ್ನು ನಾಳೆ ಐವರ್ನಾಡಿನ ರಾಜೇಶ್ ಫಾರ್ಮ್ಸ್ ನಲ್ಲಿ ನಡೆಸಲಾಗುವುದು ಎಂದು ಮನೆಯವರು ತಿಳಿಸಿರುತ್ತಾರೆ.